ಲೋಕಾ ಬಲೆಗೆ ತಾಲ್ಲೊಕು ಅಭಿವೃದ್ಧಿ ಅಧಿಕಾರಿ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಬೋರ್ ವೆಲ್ ಕೊರೆಸಿ ಕೊಡಲು ತಾಲ್ಲೊಕು ಅಭಿವೃದ್ದಿ ಅಧಿಕಾರಿಯೋರ್ವರು ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ‌.
ಚಾಮರಾಜನಗರ ವಾಲ್ಮೀಕಿ ತಾಲ್ಲೋಕು ಅಭಿವೃದ್ದಿ ಅಧಿಕಾರಿ ನಾಗರಾಜು ಲೋಕ ಬಲೆಗೆ ಬಿದ್ದ ಅಧಿಕಾರಿ.
ಕಣ್ಣೇಗಾಲದ ದೂರುದಾರರೊಬ್ಬರು ತಮ್ಮ ಜಮೀನಿಗೆ ಬೋರ್ ವೆಲ್ ಕೊರೆಸಲು ಅರ್ಜಿ ಸಲ್ಲಿಸಿದ್ದರೂ ಆಯ್ಕೆ ಮಾಡದೆ ಲಂಚಕ್ಕಾಗಿ ವಿಳಂಬ ಮಾಡಿದ್ದರು.
ಶನಿವಾರ ಎಂಟು ಸಾವಿರ ಮೊತ್ತವನ್ನು ರೇಷ್ಮೆ ಕೃಷಿ ಕಚೇರಿ ಸಮೀಪ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಇನ್ಸ್ ಪೆಕ್ಟರ್ ಶಶಿಕುಮಾರ್, ಮುಖ್ಯಪೇದೆ ಮಹಾಲಿಂಗಸ್ವಾಮಿ, ಮಹದೇವಸ್ವಾಮಿ, ಶ್ರಿನಿವಾಸ, ಮನೋರಂಜನ್ ದಾಳಿ ಕಾರ್ಯದಲ್ಲಿ ಭಾಗವಹಿಸಿದ್ದರು.