ಬೆಳಗಾವಿ : ಬೇರೆ ಪಕ್ಷ ಕಟ್ಟುವ ಮನಸ್ಸು ನಮಗೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಜತೆ ಊಟ ಮಾಡಿದ್ದೇನೆ. ಆದರೆ ಬೇರೆ ಪಕ್ಷ ಕಟ್ಟುವ ಮನಸ್ಸಿಲ್ಲ ಎಂದರು.
ಯುಗಾದಿಗೆ ಬದಲಾವಣೆಯಾಗುವುದು ಖಚಿತ. ಹೊಸ ನಾಯಕರನ್ನು ಬೆಳೆಸುವ ಅಗತ್ಯ ಇದೆ. ಆದರೆ ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಸು ಅವರು ಹೇಳಿದರು.
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಂ ಮೀಸಲಾತಿ ದೊರಕಬೇಕೆಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿಯೇ ಹೇಳಿದ್ದರು. ಬಜೆಟ್ ಮಂಡಿಸುವ ಮುನ್ನವೆ ಮೀಸಲಾತಿ ಕೊಡುತ್ತೇವೆ ಎಂದು ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಯತ್ನಾಳ್ ಹೇಳಿದರು.

