ಬೆಂಗಳೂರು: ಧ್ಯಾನದಿಂದ ಮನಃಶಾಂತಿ ಸಿಗಲಿದೆ. ಓದಿನ ಕಡೆ ಹೆಚ್ಚು ಗಮನಹರಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ಧ್ಯಾನ ಮಾಡುವುದು ಒಳಿತು ಎಂದು ಬಹಳ ಹಿಂದಿನಿಂದಲೂ ತಿಳಿದವರು ಹೇಳುತ್ತಲೇ ಇದ್ದರು.ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ.
ಇನ್ನುಮುಂದೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳು ಧ್ಯಾನ ಮಾಡಲಿದ್ದಾರೆ.
ಪ್ರತಿದಿನ 10 ನಿಮಿಷ ಧ್ಯಾನ ಮಾಡಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳ ಮನವಿ ಪತ್ರದ ಮೇರೆಗೆ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ.
ವಿಧ್ಯಾರ್ಥಿಗಳಲ್ಲಿ ಧೃಢತೆ, ಏಕಾಗ್ರತೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಯಾಗಲು ಧ್ಯಾನ ಸಹಕಾರಿಯಾಗಲಿದೆ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಾಲೆ ಹಾಗೂ ಪದವಿ ಪೂರ್ವ ವಿಧ್ಯಾರ್ಥಿಗಳು ಇನ್ಮುಂದೆ ಧ್ಯಾನ ಮಾಡಬೇಕು,ಆದರೆ ಇದು ಎಷ್ಟರಮಟ್ಟಿಗೆ ಆದೀತೋ ಕಾದುನೋಡಬೇಕಿದೆ.

