ಮೈಸೂರು: ಐಪಿಎಲ್ ನಲ್ಲಿ ಆರ್ ಸಿ ಬಿ ಗೆಲ್ಲಲಿ ಎಂದು ಪ್ರಾರ್ಥಿಸಿ ಮಹಿಳೆಯರು ಉಪವಾಸ ಮಾಡಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಮೈಸೂರಿನ ಕೆ ಜಿ ಕೊಪ್ಪಲಿನಲ್ಲಿರುವ ಆದಿಶಕ್ತಿ ಚಾಮುಂಡೇಶ್ವರಿ ದೇವಿಯಲ್ಲಿ ಶ್ರೀ ದುರ್ಗಾ ಪೌಂಡೇಶನ್ ವತಿಯಿಂದ ಮಹಿಳೆಯರು ಉಪವಾಸ ಮಾಡಿ, ಆರ್ ಸಿ ಬಿ ತಂಡದ ಹೆಸರಿನಲ್ಲಿ ಕುಂಕುಮ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ವಕೀಲರಾದ ಜಯಶ್ರೀ ಶಿವರಾಮ್, ಸುಶೀಲ, ರೂಪ,ಹೇಮಾ, ವಿಜಯ, ಸುವರ್ಣ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಮಹಿಳೆಯರು ಆ ರ್ಸಿಬಿ ಗೆಲುವು ಸಾಧಿಸಿಯೇ ಸಾಧಿಸುತ್ತದೆ ಅದಕ್ಕಾಗಿ ನಮ್ಮ ಆಟಗಾರರಿಗೆ ಶಕ್ತಿ ತುಂಬಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿ ಪೂಜೆ ಮಾಡಿದ್ದೇವೆ ಎಂದು ಹೇಳಿದರು.
ಮಹಿಳೆಯರು ಬರಿ ಧಾರವಾಹಿಗೆ ಸೀಮಿತವಲ್ಲ ಹೊರಗಿನ ಪ್ರಪಂಚಕ್ಕೂ ತೆರೆದುಕೊಳ್ಳುತ್ತಾರೆ ಎಂಬುದನ್ನು ಸಾಬೀತು ಮಾಡಲು ನಾವು ಕೂಡ ಕ್ರಿಕೆಟ್ ಪ್ರೇಮಿಗಳು ಎಂಬುದನ್ನು ತೋರ್ಪಡಿಸಲು ಮತ್ತು ಆರ್ ಸಿಬಿ ತಂಡಕ್ಕೆ ಗೆಲುವು ಸಿಗಲಿ ಎಂದು ಪ್ರಾರ್ಥಿಸಿ ತಾಯಿ ಚಾಮುಂಡೇಶ್ವರಿಗೆ ನಾವೆಲ್ಲ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಆರ್ ಸಿ ಬಿ ತಂಡದಲ್ಲಿರುವ ವಿರಾಟ್ ಕೊಹ್ಲಿ ಈ ಬಾರಿ ಕಪ್ಪನ್ನು ಗೆದ್ದು ತಂದೆ ತರುತ್ತಾರೆ. ರಾತ್ರಿ 11 ಗಂಟೆಗೆ ನಾವು ವಿಜಯೋತ್ಸವ ಆಚರಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತೇವೆ ನಮ್ಮ ತಂಡದವರಿಗೆ ಶಕ್ತಿ ಸಿಗಲಿ ಕಪ್ ಗೆದ್ದು ಬರಲಿ ಎಂದು ಹಾರೈಸಿ ನಾವು ತಾಯಿಗೆ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.