ಉಡುಪಿಯಲ್ಲಿ ಹಿಜಬ್ ಸಂಬಂಧ ಸಮಸ್ಯೆ ಇಲ್ಲ -ರಘುಪತಿ ಭಟ್
ಬೆಂಗಳೂರು: ಉಡುಪಿ ಜಿಲ್ಲಾ ಮಟ್ಟದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಹಿಜಬ್ ವಿವಾದಿತ ಶಾಲೆಯಲ್ಲಿ ಶಾಂತಿ ಸಭೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಇರುವುದೇ ರೂಲ್ಸ್ ಶಿಕ್ಷಕರಿಗೂ ಅನ್ವಯವಾಗುತ್ತದೆ ಸಧ್ಯಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.
ನಮ್ಮ ಸರ್ಕಾರಿ ಶಾಲೆಯಲ್ಲೇ ಹಿಜಬ್ ವಿವಾದ ಉಂಟಾಗಿತ್ತು. ಒಂದು ಕೋಮಿನ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು. ಪ್ರತಿಭಟನೆ ಮಾಡಿದವರು ಶೇ.1ರಷ್ಟೂ ಇಲ್ಲ. ಹೀಗಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದರು.

