ಮೈಸೂರು: ಜಿಲ್ಲೆಯ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಬಳಿ ಕಾರು-ಬೈಕ್ ಅಪಘಾತದಲ್ಲಿ ಕಾವೇರಿ ನದಿಗೆ ಹಾರಿ ಬಿದ್ದಿದ್ದ ಮಹಿಳೆಯ ದೇಹ ಪತ್ತೆಯಾಗಿದೆ.
ನಿನ್ನೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್ ಸವಾರ ಶಂಕರ್(21) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದರು. ಆತನ ತಾಯಿ ಪಾರ್ವತಿ ಅವರ ದೇಹ ಹಾರಿ ಕಾವೇರಿ ನದಿಗೆ ಬಿದ್ದಿತ್ತು.
ಮೃತ ದೇಹ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಮೃತರು ಮೈಸೂರಿನ ಮೇಟಗಳ್ಳಿ ಕರಕುಶಲ ನಗರದ ನಿವಾಸಿಗಳು.
ತಾಯಿ ಮಗ ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭಸಿತ್ತು.
ಅಪಘಾತದ ರಭಸಕ್ಕೆ ಬೈಕ್ ಸವಾರ ಶಂಕರ್(21) ಸ್ಥಳದಲ್ಲೇ ಮೃತಪಟ್ಟಿದ್ದರು ಆತನ ತಾಯಿ ಪಾರ್ವತಿ ದೇಹ ನದಿಗೆ ಹಾರಿ ಬಿದ್ದಿತ್ತು.
ನಿನ್ನೆ ಕತ್ತಲಾದ ಕಾರಣ ಶವ ಹೊರ ತೆಗೆಯಲಾಗಿರಲಿಲ್ಲ.ಇಂದು ಶೋಧ ಕಾರ್ಯ ನಡೆಸಿ ಮೃತ ದೇಹ ಹೊರ ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.