ರಾಮಾನುಜಾಚಾರ್ಯರು ಪರಮಾತ್ಮನ ಅವತಾರ:ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಸ್ವಾಮೀಜಿ

ಮೈಸೂರು: ಮೈಸೂರು ಜಿಲ್ಲಾ ಶಾತ್ತಾದ
ಶ್ರೀ ವೈಷ್ಣವ ಸಂಘದ ವತಿಯಿಂದ ಭಗವದ್ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಹಾಗೂ 16ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಯಿತು.

ಸರಸ್ವತಿಪುರಂ ರೋಟರಿ ಪಶ್ಚಿಮ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಈ ಮಹಾಸಭೆಯಲ್ಲಿ ಯದುಗಿರಿ ಯತಿರಾಜ ಮಠದ ಪೂಜ್ಯ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಸ್ವಾಮೀಜಿ ಯವರು ಶ್ರೀ ರಾಮಾನುಜಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭೆಯನ್ನು ಉದ್ಘಾಟಿಸಿದರು.

ಈ‌ ವೇಳೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಂತರ ಆಶೀರ್ವಚನ ನೀಡಿದ ಯದುಗಿರಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಸ್ವಾಮೀಜಿಯವರು, ರಾಮಾನುಜಾ ಚಾರ್ಯರು ಸಾಮಾನ್ಯರಲ್ಲ.ಅವರು ಕೃಷ್ಣಣ ಅವತಾರ,ಆದಿಶೇಷನ‌ ಅವತಾರ,ಲಕ್ಷ್ಮಣನ ಅವತಾರ,ಪರಮಾತ್ಮನ ಅವತಾರ.ಹೀಗೆ ಎಲ್ಲ ಅವತಾರಗಳ ಸಂಗಮ ರಾಮಾನುಜರು.ಹಾಗಾಗಿ ಅವರಿಗೆ ಮಹಾನ್‌ ಶಕ್ತಿ ಇತ್ತು ಎಂದು ಬಣ್ಣಿಸಿದರು.

ಅವರು ಅವತಾರ ಎತ್ತಿದ ಭರತಭೂಮಿಯೇ ಧನ್ಯ.ಅವರು ಲೋಕೋದೋರಕ್ಕಾಗಿಯೇ ಜನಿಸಿದ್ದರು.ಎಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಹೇಳಿದರು.

ಇದೇ ವೇಳೆ ಇಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಿದ ಪ್ರಯೋಜನವನ್ನು ನೂರಕ್ಕೂ ಹೆಚ್ಚು ಸಮಾಜದ ಬಂಧುಗಳು ಸದುಪಯೋಗಪಡಿಸಿ ಕೊಂಡರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆರ್ ಲೋಕೇಶ್,ಉಪಾಧ್ಯಕ್ಷ ಎಚ್ ಎಸ್ ಪ್ರೇಮ್ ಕುಮಾರ್,ಎಲ್ ಟಿ ಸ್ವಾಮಿ,ಕಾರ್ಯದರ್ಶಿ ಪುಟ್ಟಸ್ವಾಮಿ,ವಿ ಪಾಲಾಕ್ಷ, ಬಿ ಪಿ ನಾರಾಯಣ ಜಿಯರ್,ಎಸ್ ಆರ್ ರಾಘು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀದೇವಿ, ಸಾಹಿತಿಗಳಾದ ಪುಷ್ಪ ಅಯ್ಯಂಗಾರ್, ಯೋಗ ನರಸಿಂಹ( ಮುರಳಿ), ಚಕ್ರಪಾಣಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.