ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭ್ಯ:ಸುತ್ತೂರು ಶ್ರೀ

ಮೈಸೂರು: ನಾವೆಲ್ಲರೂ ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭಿಸಲಿದೆ ಎಂದು ಸುತ್ತೂರು ಪೀಠಾಧೀಶ್ವರರಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ನುಡಿದರು.

ನಾದಮಂಟಪದ 27 ನೆ‌ ವಾರ್ಷಿಕೋತ್ಸವ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುತ್ತೂರು ಶ್ರೀಗಳು ಮಾತನಾಡಿದರು.

ಪಹಲ್ಗಂ ದಾಳಿ ಖಂಡಿಸಿ ಇತ್ತೀಚಿಗೆ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಕಾಲು ನೋವಿನಲ್ಲೂ ಸ್ವತಹ ಗಣಪತಿ ಶ್ರೀಗಳು ಭಾಗವಹಿಸಿದರು. ಇಂತಹ ಆಕ್ರಮಣ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು. ಅಂದಿನ ದಾಳಿಯಿಂದ ನಮ್ಮ ದೇಶದ ಅದೆಷ್ಟೋ ಕುಟುಂಬಗಳು ನೋವು ಅನುಭವಿಸುತ್ತಿವೆ ಎಂದು‌ ಸುತ್ತೂರು ಶ್ರೀಗಲಕು ವಿಷಾದಿಸಿದರು.

ನಮ್ಮನ್ನೆಲ್ಲ ರಕ್ಷಿಸಲು ಹೋರಾಟ ಮಾಡುತ್ತಿರುವ ಸೈನಿಕರಿಗೆ ಮತ್ತು ದೇಶ ರಕ್ಷಣೆಗೆ ಸದಾ ಶ್ರಮಿಸುತ್ತಿರುವ ನಮ್ಮ ಯೋಧರನ್ನು ಗೌರವಿಸೋಣ ಪ್ರಾಣದ ಹಂಗು ತೊರೆದು ದೇಶ ಕಾಯುತ್ತಿರುವವರಿಗಾಗಿ ನಾವೆಲ್ಲ ಪ್ರಾರ್ಥಿಸೋಣ ಎಂದು ಸುತ್ತೂರು ಶ್ರೀಗಳು ಕರೆ ನೀಡಿದರು.

ಅವಧೂತ ದತ್ತಪೀಠ ಮತ್ತು ಗಣಪತಿ ಸಚ್ಚಿದಾನಂದ ಆಶ್ರಮ ಆಸುಪಾಸಿನಲ್ಲೇ ಇವೆ.ಅವಧೂತ ದತ್ತಪೀಠ,ಸಚ್ಚಿದಾನಂದ ಮೂಲ ಆಶ್ರಮ ಮೈಸೂರಿನಲ್ಲಿ ಇರುವುದು ಮೈಸೂರಿಗರ ಹೆಮ್ಮೆ. ಇಂತಹ ಅತ್ಯುತ್ತಮ ತಾಣವನ್ನು ಪೂಜ್ಯರು ಕೊಡುಗೆಯಾಗಿ ಕೊಟ್ಟಿರುವುದು ಪುಣ್ಯ ಎಂದು ಬಣ್ಣಿಸಿದರು.

ಗಣಪತಿ ಸಚ್ಚಿದಾನಂದ ಆಶ್ರಮ ಮತ್ತು ಸುತ್ತೂರು ಮಠಗಳು ಮಾನಸಿಕವಾದಂತಹ ನಿಕಟ ಸಂಬಂಧ ಹೊಂದಿವೆ ಈ ಎರಡೂ ಆಶ್ರಮಗಳು ಮಧುರ ಬಾಂಧವ್ಯದ ಸಂಕೇತವಾಗಿವೆ. ನಾನು ಇಂದು ಒಂದು ಕುಟುಂಬದ ಸಮಾರಂಭದಲ್ಲಿ ಸದಸ್ಯನಾಗಿ ಪಾಲ್ಗೊಂಡಂತಹ ಅನುಭವ ಆಗಿದೆ ಇದು ನನಗೆ ಅತ್ಯಂತ ಸಂತಸ ತಂದಿದೆ ಶ್ರೀಗಳು ಇನ್ನೂ ಆರೋಗ್ಯವಂತರಾಗಿ ಶತಮಾನದ ಕಡೆಗೆ ನಡೆಯಲಿ ಎಂದು ಪ್ರಾರ್ಥಿಸಿದರು.

ಗಣಪತಿ ಸ್ವಾಮೀಜಿಯವರು ಭಕ್ತರಿಗೆ ಅನುಗ್ರಹಿಸುತ್ತಾರೆ ಆದರೆ ಅದೇ ಭಕ್ತ ವೃಂದವು ಸ್ವಾಮೀಜಿಗಳ ಆರೋಗ್ಯ ಮತ್ತು ಆಯುಷ್ ವೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿದರೆ ಅವನು ಕರುಣಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ದೇಶ ಆಧ್ಯಾತ್ಮಿಕವಾಗಿ ಸಂಪತ್ ಭರಿತವಾದ ದೇಶ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಜಗತ್ತಿಗೆ ನಮ್ಮ ಋಷಿಮುನಿಗಳು ತಪಸ್ ಶಕ್ತಿಯಿಂದ ಮತ್ತು ಅವರ ಅನುಷ್ಠಾನದಿಂದ ಕೊಟ್ಟ ಕೊಡುಗೆ ಅಪಾರ. ಜಗತ್ತಿನಲ್ಲಿ ಈಗ ಆಗುತ್ತಿರುವ ಎಷ್ಟೋ ಸಂಶೋಧನೆಗಳನ್ನೆಲ್ಲ ಭಾರತೀಯರು ಬಹಳ ಹಿಂದೆಯೇ ಕೊಟ್ಟಿದ್ದರು ಎಂದು ಸುತ್ತೂರು ಶ್ರೀ ವಿವರಿಸಿದರು.

ಭಾರತಕ್ಕೆ ಭವ್ಯ ಪರಂಪರೆ ಇದೆ. ನದಿಗಳು ನಿರಂತರವಾಗಿ ಹರಿಯುತ್ತವೆ. ಅದೇ ರೀತಿ ಧಾರ್ಮಿಕ ಪರಂಪರೆಯು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.ಅಮನತಹ ಧಾರ್ಮಿಕ ಪರಂಪರೆಯನ್ನು ಗಣಪತಿ ಶ್ರೀಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ಅವರ ದರ್ಶನ ಮಾಡಿದರೆ ಎಷ್ಟೋ ಸಂತೃಪ್ತಿ ಸಿಗುತ್ತದೆ ಎಂದು ಭಕ್ತರು ಹೇಳುತ್ತಾರೆ, ಆಶೀರ್ವಾದ ಸಿಕ್ಕರೆ ಸಾಕು ಎಂದು ಕಾಯುವವರು ಇದ್ದಾರೆ ಎಂದು ಹೇಳಿದರು.

ಜಗತ್ತಿನಾದ್ಯಂತ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗಳು ಇವೆ.ಅವುಗಳ ಮೂಲಕ ಆಯಾ ಭಾಗದ ಜನರಿಗೆ ಶ್ರೀಗಳು ಅನುಗ್ರಹಿಸುತ್ತಾ ಬಂದಿದ್ದಾರೆ ಎಂದು ಶಿವರಾತ್ರಿ ಮಹಾ ಸ್ವಾಮೀಜಿ ನುಡಿದರು.

ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಪ್ರೀತಿ ಉಂಟು ಮಾಡಬೇಕು ಎಂಬ ಮಹಾದಾಸೆಯನ್ನು ಗಣಪತಿ ಶ್ರೀಗಳು ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ದೇಶದ ಮೇಲೆ ದಾಳಿಗಳು ನಡೆಯುತ್ತಿವೆ ಜಗತ್ತಿನಲ್ಲಿ ಆಗುತ್ತಿರುವ ಪ್ರಕ್ಷುಬ್ದ ವಾತಾವರಣಕ್ಕೆ ಶ್ರೀಗಳು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಶ್ರೀಗಳ ವಿಶ್ವ ಶಾಂತಿ ಪ್ರೀತಿಯನ್ನು ಧರ್ಮವನ್ನು ಪಾಲಿಸುವ ಮೂಲಕ ನಾವೆಲ್ಲರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಈ ವಳೆ ಸುತ್ತೂರು ಶ್ರೀಗಳು ಗಣಪತಿ ಶ್ರೀಗಳಿಗೆ ಗೌರವ ಸಮರ್ಪಿಸಿದರು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿಯವರಿಗೂ ಗೌರವಿಸಿದರು.