ನವದೆಹಲಿ: ರಾಷ್ಟ್ರ ರಾಜ್ಯದಾನಿ ದೆಹಲಿಯ ಕೆಂಪು ಕೋಟೆ ಸಮೀಪ ಕಾರೊಂದು ಸ್ಪೋಟಗಂಡಿದ್ದು ಇಡೀ ರಾಷ್ಟ್ರ ಬೆಚ್ಚಿಬಿದ್ದಿದೆ.
ಕೆಂಪುಕೋಟೆ ಸಮೀಪ ಲಾ ಕಿಲಾ ಮೆಟ್ರೊ ನಿಲ್ದಾಣದ ಗೇಟ್ ನಂ.1ರಲ್ಲಿ ನಿಲ್ಲಿಸಿದ್ದ ಕಾರ್ ಸ್ಫೋಟಗೊಂಡಿದ್ದು,8 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ 9 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯ ಜ್ವಾಲೆ ಬಹಳ ಎತ್ತರದವರೆಗೆ ಚುಮ್ಮಿದೆ ದಟ್ಟ ಹೊಗೆ ಆವರಿಸಿದೆ.ಇಡೀ ದೆಹಲಿಯ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
‘ಲಾ ಕಿಲಾ ಮೆಟ್ರೊ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದೆ,ಸ್ಪೋಟದ ತೀವ್ರ ತೆಗೆ ಅಕ್ಕಪಕ್ಕದಲ್ಲಿದ್ದ ಕಾರುಗಳು, ಇತರ ವಾಹನಗಳಿಗೂ ಬೆಂಕಿ ತಗುಲಿದೆ ಅಕ್ಕ,ಪಕ್ಕದ ಕಟ್ಟಡದ ಗಾಜುಗಳು ಒಡೆದಿದೆ.ಸ್ಥಳದಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲದೆ ಜನ ಗಾಬರಿಯಿಂದ ಓಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು,ಕೆಂಪುಕೋಟೆ ಸುತ್ತಮುತ್ತ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಕಾರು ಸ್ಫೋಟವಾದ ಬೆನ್ನಲ್ಲೇ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

