ಮೈಸೂರು: ಮೈಸೂರಿನಲ್ಲಿ ಮಾಜಿ ಸೈನಿಕರುಗಳ ಸತ್ಯ ಮೇವ ಜಯತೇ ಟೀಮ್ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು.
ನಗರದ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ದಲ್ಲಿ ಸತ್ಯ ಮೇವ ಜಯತೇ ತಂಡದಿಂದ ದೇಶದ ಗಡಿಯನ್ನು ಕಾಪಾಡಲು ತಮ್ಮ ಪ್ರಾಣವನ್ನು ಅರ್ಪಿಸಿದ ಅಮರ ವೀರಯೋಧರಾದ ಕ್ಯಾಪ್ಟನ್ ವಿಕ್ರಂ ಭತ್ರ,ಕ್ಯಾಪ್ಟನ್ ಸೌರಭ ಕಾಲಿಯ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಅವರ ಭಾವಚಿತ್ರಕ್ಕೆ ಗಣ್ಯರು ತುಪ್ಪದ ದೀಪವನ್ನು ಹಚ್ಚಿ, ಭಾರತ್ ಮಾತಾ ಕೀ ಜೈ, ಅಮರ ವೀರ ಯೋಧರುಗಳಿಗೆ ಜೈ ಎಂಬ ಜೈಕಾರಗಳನ್ನು ಕೂಗುತ್ತಾ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸೈನಿಕರಾದ ಮಹೇಶ್ ವಿ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಮರ ಯೋಧರುಗಳ ಬಲಿದಾನ ತಿಳಿಸಿ, ಅವರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ವೀರರನ್ನು ಸ್ಮರಿಸುವುದು ನಮ್ಮ ಕರ್ತವ್ಯ, ಅವರ ಆದರ್ಶಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ, ಸರ್ಕಾರ ಮುಂದಿನ ದಿನಗಳಲ್ಲಿ ಕಾರ್ಗಿಲ್ ಯುದ್ಧದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಬೇಕು ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಅದರ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದ್ದರು.
ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ ಅವರು ಮಾತನಾಡಿ, ಕಾರ್ಗಿಲ್ ವಿಜಯ ದಿನವನ್ನು ನಾವುಗಳು ಮುಂದಿನ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಇಡೀ ಮೈಸೂರಿನಲ್ಲೇ ಮಾದರಿಯಾಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಈ ವರ್ಷ ಸತ್ಯಮೇವ ಜಯತೆ ಟೀಮ್ ನ ಮಾಜಿ ಸೈನಿಕರು ಕಾರ್ಗಿಲ್ ವಿಜಯ ದಿನವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಕ್ಕಾಗಿ ಮಡಿದ ಅಮರ ಯೋಧರುಗಳನ್ನು ನಾವುಗಳು ಯಾವಾಗಲೂ ಮರೆಯಬಾರದು ಮತ್ತು ಅವರ ಕುಟುಂಬದವರು ಎಷ್ಟೊಂದು ದುಃಖ ಅನುಭವಿಸುತ್ತಿರುತ್ತಾರೆ, ಇಂತಹ ಕಾರ್ಯಕ್ರಮಗಳನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ತಿಳಿಸಿದರು.
ಕಾರ್ಗಿಲ್ ವಿಜಯದ ಸಂಕೇತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ದೇಶಾಭಿಮಾನಿಗಳಿಗೆ ಸತ್ಯಮೇವ ಜಯತೆ ಟೀಮ್ ನಿಂದ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಯುವ ಮುಖಂಡರುಗಳಾದ ಜಿ ರಾಘವೇಂದ್ರ, ಸಮಾಜಸೇವಕರಾದ ವಿಕ್ರಮ ಅಯ್ಯಂಗಾರ್, ಸತ್ಯ ಮೇವ ಜಯತೇ ಟೀಮ್ ನ ಸದಸ್ಯರಾದ ಮಹೇಶ್ ವಿ, ಶ್ರೀನಿವಾಸ್, ಪುರುಷೋತ್ತಮ,ಅನಂತ್ ಕುಮಾರ್,ಮಹದೇವ್, ಪ್ರಸನ್ನ, ಮಂದಣ್ಣ, ನಾಗೇಶ್, ರಾಮಣ್ಣ, ನಿತಿನ್, ಬಾಲಕೃಷ್ಣ,ಅನಿಲ್ ಎಸ್, ಅನಿಲ್ ಎ.ಜಿ., ಮಹೇಶ್ ಹೆಚ್.ಎಲ್, ಕಾರಿಯಪ್ಪ, ಜಯಕುಮಾರ್, ಪದ್ಮನಾಭ, ಹಾಲಿ ಸೈನಿಕರಾದ ಹರೀಶ್ ಮತ್ತಿತರ 30ಕ್ಕಿಂತಲೂ ಹೆಚ್ಚು ಮ್ಯಾಜಿ ಸೈನಿಕರು, ಅವರ ಕುಟುಂಬ ವರ್ಗದವರು, ಮಕ್ಕಳು,ಸಾರ್ವಜನಿಕರು ಭಾಗವಹಿಸಿದ್ದರು.

