ಮೈಸೂರು: ರಾಷ್ಟ್ರೀಯ ಹಿಂದೂ ಸಮಿತಿ ಹಾಗು ವಿ.ಕೆ.ಎಸ್ ಫ಼ೌಂಡೆಶನ್ ವತಿಯಿಂದ ಭಾನುವಾರ ನಗರದಲ್ಲಿ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿಯನ್ನು ಮಾಸ್ಕ್ ಹಾಗೂ ಸಿಹಿ ಹಂಚಿ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೆಗೌಡರು, ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದ್ದರು. ಈಗ ಈ ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಇದು ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ.ಇಂತಹ ಮಹಾನ್ ಪುರುಷರ ಜಯಂತಿಗಳನ್ನು ಕೇವಲ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು. ಅವರ ಜೀವನದ ಆದರ್ಶಗಳನ್ನು ಜೀವನದಲ್ಲಿ ಅವಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕದ ಪಾಳೇಗಾರರಾಗಿದ್ದರು. ಪರಶುರಾಮನ ಹಾದಿಯಲ್ಲಿ ನಡೆದು ಬಂದ ಮಹಾನ್ ವೀರ. ಕೆಂಪೇಗೌಡರು ಯಾವುದೇ ಒಂದು ಜನಾಂಗದ ನಾಯಕರಲ್ಲ ಅವರು ಹಿಂದೂ ಧರ್ಮಕ್ಕೆ ಕಿರೀಟ. ಅವರು ಮಾಡಿರುವ ಕೆಲಸಗಳನ್ನು ಸ್ಮರಿಸುತ್ತ ಈ ದಿನವನ್ನು ಆಚರಿಸೋಣ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ಯಾರೆಜ್ ರವಿ ಶಂಕರಣ್ಣ, ರಾಷ್ಟ್ರೀಯ ಹಿಂದೂ ಸಮಿತಿ ನಗರಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ತೇಜಸ್, ಸಹಕಾರ್ಯದರ್ಶಿ ಶಿವಣ್ಣ, ಕಿರಣ, ರಕ್ಷಿತ್, ಪ್ರಜ್ವಲ್, ಯೊಗೇಶ್, ಶಶಿಕುಮಾರ್, ಆನಂದ್, ದಿಲೀಪ್ ಕುಮಾರ್, ಮಹೇಶ್ ಹಾಗು ಇನ್ನಿತರರು ಉಪಸ್ಥಿತರಿದ್ದರು.

