ಬಿಜೆಪಿ ಒಂದು ಕೋಟಿ ಗಿಡ ನೆಟ್ಟು ಪೋಷಣೆ ಮಾಡುವ ಗುರಿ ಹೊಂದಿದೆ -ಗೋವಿಂದರಾಜು

ಮೈಸೂರು: ಕೋವಿಡ್ 2.0 ಸಂಧರ್ಭದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಇದನ್ನು ಮನಗಂಡ ಬಿಜೆಪಿ ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಗುರಿ ಹೊಂದಿದೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ವೃಕ್ಷರೋಹಣಾದ ಸಂಚಾಲಕರಾದ ಗೋವಿಂದರಾಜುರವರು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಶ್ಯಾಂ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜ್ಞಾನಿಗಳ ಸಲಹೆ ಹಾಗೂ ಮುಂದಿನ ಯುವ ಪೀಳಿಗೆಗೆ ಆಕ್ಸಿಜನ್ ನ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಒಂದು ಲಕ್ಷ ಸೀಡ್ ಬಾಲ್ ಗಳನ್ನು ಮಾಡುವ ಘಟಕವನ್ನು ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಮಾಡುತ್ತಿದ್ದು ನಂತರ ಅದನ್ನು ಸಾಂಪ್ರದಾಯಿಕ ವಾಗಿ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೀಡ್ ಬಾಲ್ ಎಸೆಯುವ ಮೂಲಕ ಭಾ.ಜ.ಪ.ರಾಜ್ಯ ಅಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲು ರವರು ಚಾಲನೆ ನೀಡಲಿದ್ದಾರೆ ಎಂದರು.

ಇವರ ಜೊತೆ ರಾಜ್ಯ ಓ.ಬಿ.ಸಿ.ಅಧ್ಯಕ್ಷ ನೇ.ಲ. ನರೇಂದ್ರ ಬಾಬುರವರು,ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ ಸಿಂಹ, ಜಿಲ್ಲಾ ಮಂತ್ರಿ ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದರಾಜು, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ, ಗ್ರಾಮಾಂತರ ಅಧ್ಯಕ್ಷರಾದ ಮಂಗಳಾ ಸೋಮಶೇಖರ್, ಓ.ಬಿ.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಮತ್ತು ಇನ್ನಿತರೆ ನಾಯಕರು ಗಳು ಉಪಸ್ಥಿತಿ ಇದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆಂದರು.

ಸೀಡ್ ಬಾಲ್ ಗಳನ್ನು ಚಾಮುಂಡಿ ಬೆಟ್ಟ, ಹೆಚ್.ಡಿ.ಕೋಟೆಯ ಸುತ್ತ ಮುತ್ತಲಿನ ಕಾಡಿನ ಪ್ರದೇಶ, ಹುಣಸೂರಿನ ಕಾಡಿನ ಪ್ರದೇಶ, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶ, ಪಿರಿಯಾಪಟ್ಟಣದ ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಸಂಖ್ಯೆಯ ರಕ್ತ ಚಂದನ,ಬೇವು,ಹೊಂಗೆ, ಗುಲ್ಮಾರು, ಕಾಡು ಬಾದಾಮಿ, ಬಿದಿರು, ನೇರಳೆ, ಹತ್ತಿ ಮುಂತಾದ ಸೀಡ್ ಬಾಲ್ ಗಳನ್ನು ಭಾ.ಜ.ಪ.ಕಾರ್ಯಕರ್ತರು ಗಳು ಹಾಕಲಿದ್ದಾರೆಂದು ಅವರು ತಿಳಿಸಿದರು.

ಇದರ ತಯಾರಿಕೆಗೆ ಸುಮಾರು ಹತ್ತು ಟನ್ ಗೊಬ್ಬರ, ಒಂದು ಲಕ್ಷ ಎಲ್ಲಾ ತಳಿಯ ಬೀಜಗಳು, ಹತ್ತು ಟನ್ ಕೆಂಪು ಮಣ್ಣು, ನಾಲ್ಕು ಟನ್ ನೀರು ಮಿಶ್ರಿತ ಕಪ್ಪು ಮಣ್ಣು ತಯಾರು ಮಾಡಲು ಸುಮಾರು ನೂರು ಜನ ಕಾರ್ಯಕರ್ತ ರು ತೊಡಿಗಿರುವುದು ವಿಶೇಷ ಎಂದರು.

ಕರ್ನಾಟಕ ರಾಜ್ಯಕ್ಕೆ ಸಿಂಹಪಾಲು
ನಂತರ ಮಾತನಾಡಿದ ನಗರ ಅಧ್ಯಕ್ಷ ಜೋಗಿಮಂಜು, ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಂಹಪಾಲು,ಅಂದರೆ ರಾಜ್ಯದಿಂದ ಆಯ್ಕೆ ಯಾದವರ ಪೈಕಿಯಲ್ಲಿ ಶೇಕಡಾ 25ರಷ್ಟು ಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಕೂಡ ಮಂತ್ರಿಮಂಡಲದಲ್ಲಿ 27 ಜನ ಹಿಂದುಳಿದ ವರ್ಗದವರು ಮಂತ್ರಿಗಳಾಗಿರುವುದು ನೋಡಿದರೆ ಹಿಂದುಳಿದ ವರ್ಗದಲ್ಲಿರುವ 126 ಸಮಾಜಕ್ಕೆ ಸಂದ ಗೌರವ ಎಂದರು.

ಹಾಗೇಯೆ ಎಸ್ಸಿ, ಎಸ್ ಟಿಯ ಸಮಾಜದವರನ್ನೂ 20 ಜನ ಮಂತ್ರಿ ಮಾಡಿರುವುದು ವಿಶೇಷ ಅದರಲ್ಲೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ್ದಾರೆಂದರು.

ಸುದ್ದಿಗೋಷ್ಠಿ ಯಲ್ಲಿ ಬಿಜೆಪಿ ಓ.ಬಿ.ಸಿ. ಗ್ರಾಮಾಂತರ ಅಧ್ಯಕ್ಷ ಪರಶುರಾಮಪ್ಪ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮೈ.ಪು.ರಾಜೇಶ್, ಉಮೇಶ್, ರಾಜ್ಯ ಒ.ಬಿ.ಸಿ.ಸೋಶಿಯಲ್ ಮೀಡಿಯಾ ಸಹ ಸಂಚಾಲಕ ಸು. ಮುರುಳಿ ಉಪಸ್ಥಿತಿ ಇದ್ದರು.