ಮೈಸೂರು: ಭಾರತೀಯರು ಟೋಕಿಯೊದಲ್ಲಿ ನೆಡೆಯುವ ಕ್ರೀಡೆಯಲ್ಲಿ ಸುವರ್ಣ ಪದಕ ಗೆದ್ದು ಬರಲಿ ಎಂದು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಹಿರಿಯ ಕಿರಿಯ ಕ್ರೀಡಾಪಟುಗಳು ಹಾಗೂ ಅಂಗವಿಕಲ ಕ್ರೀಡಾಪಟುಗಳು ಸೈಕಲ್ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.
ನಂತರ ಮಾತನಾಡಿದ ಯುವಮುಖಂಡ ವಿಕಾಸ್ ಶಾಸ್ತ್ರಿ, ಕೊರೊನಾ ನಿರ್ಬಂಧನೆಗಳ ನಡುವೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ಒಲಿಂಪಿಕ್ಸ್ ನಲ್ಲಿ ಭಾರತ ತನ್ನ ಖಾತೆ ತೆರೆದಿದೆ ಇದು ಬಹಳ ಖುಷಿ ಸಂಗತಿ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಭಾರತೀಯ ಆಟಗಾರರು ಇನ್ನಷ್ಟು ಪದಕ ಗೆದ್ದು ತಂದು ದೇಶಕ್ಕೆ ಕೀರ್ತಿ ತರಬೇಕೆಂಬುದು ನಮ್ಮ ಆಶಯ ಎಂದರು.
ಈ ಜಾಥದ ಮುಖ್ಯ ಉದ್ದೇಶ ನಮ್ಮ ಕ್ರೀಡಾ ಪಟುಗಳ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರುವುದು ಎಂದರು
ಇದದೇ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್, ಕೋವಿಡ್ ಕಾಲದಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಮ್ಮ ಭಾರತೀಯ ಕ್ರೀಡಾ ಪಟುಗಳು ಗೆಲ್ಲುವ ನಿರೀಕ್ಷೆ ಇದೆ. ಒಲಿಂಪಿಕ್ಸ್ಗೆ ತೆರಳಿರುವ ಕ್ರೀಡಾಪಟುಗಳಿಗೆ ಈ ಬಾರಿ ಸರ್ಕಾರ ಉತ್ತಮ ಬೆಂಬಲ ನೀಡಿದೆ. ಹೀಗಾಗಿ ಅವರ ಹುಮ್ಮಸ್ಸು ಹೆಚ್ಚಿದೆ ಎಂದರು.
ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ಮುಂತಾದ ಕ್ರೀಡೆಗಳಲ್ಲಿ ಪದಕ ಗೆಲ್ಲುವ ಸಾಧ್ಯತೆಗಳು ಹೆಚ್ಚು ಇವೆ. ಇಲ್ಲಿಯ ವರೆಗೆ ಒಂದೇ ಆವೃತ್ತಿಯಲ್ಲಿ ಆರು ಪದಕ ಗೆದ್ದಿರುವುದು ಭಾರತದ ಗರಿಷ್ಠ ಸಾಧನೆ. ಈ ಬಾರಿ ಇದರ ದುಪ್ಪಟ್ಟು ಸಂಖ್ಯೆಗಿಂತ ಹೆಚ್ಚು ಪದಕಗಳು ಸಿಗಲಿವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿ.ಕೆ.ಎಸ್ ಫ಼ೌಂಡೇಶನ್ ಪದಾಧಿಕಾರಿಗಳಾದ ತೇಜಸ್, ಪ್ರದೀಪ್ , ಗಗನ್, ಮಂಜುನಾಥ, ಜಿಮ್ನ್ಯಾಸ್ಟಿಕ್ ತರಬೇತಿದಾರ ಅರುಣ್ ಪಾಟಿಲ್, ಅಂತರಾಷ್ಟ್ರೀಯ ಕ್ರೀಡಾಪಟು ಆರಾಧ್ಯ, ವಕೀಲ ಜೋಶಿ ಅಕ್ಷಯ್ ಹಾಜರಿದ್ದರು.

