ಕಾಲೇಜು ಬಳಿ ಹಿಜಾಬ್ ಗಲಭೆ ಮಾಡುವವರನ್ನು ಒದ್ದು ಒಳಗೆ ಹಾಕಿ -ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಹಿಜಾಬ್ ಹಾಕಿಸಲು ಹಾಗೂ ತೆಗೆಸಲು ಕಾಲೇಜು ಬಳಿ ಬಂದು ಗಲಾಟೆ  ಮಾಡುವವರನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ‌. ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಳ್ಳಿ. ಮೊದಲು ಪಾಠಗಳು ನಡೆಯಲಿ ಎಂದು ಸಲಹೆ ನೀಡಿದರು.

ವಿನಾಕಾರಣ‌ ವಿದ್ಯಾರ್ಥಿಗಳನ್ನು ಉತ್ತೇಜಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ನ್ಯಾಯಾಲಯದ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸೂಚಿಸಿದ ಜೋಶಿ, ಇದನ್ನು ಹೀಗೆಯೇ ಬಿಟ್ಟರೆ  ಅಂತಿಮ ಆದೇಶವನ್ನೂ ಯಾರೂ ಪಾಲಿಸುವುದಿಲ್ಲ ಅನ್ನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಹಿಜಬ್ ಗಲಭೆ ತಡೆಯಲು ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್‌ ನವರಿಗೆ ಧರಣಿ ಮಾಡುವುದೇ ಕೆಲಸವಾಗಿದೆ. ಮುಂದಿನ ವರ್ಷಗಳಲ್ಲಿಯೂ ಅವರಿಗೆ‌ ಅದೇ ಕೆಲಸ ಮುಂದುವರಿಯಲಿದೆ‌‌ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.