ಮೈಸೂರು: ಮಂಗಳೂರಿನಲ್ಲಿ ಬಾಂಬ್ ಸ್ಪೋಟಿಸಿದ ಉಗ್ರ ಶಾರಿಖ್ ಕುಟುಂಬಸ್ಥರನ್ನು ಪೋಲಿಸರು ವಿಚಾರಣೆ ಮಾಡುತ್ತಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿರುವ ಶಾರಿಖ್ ಚಿಕ್ಕಮ್ಮ ಸೇರಿದಂತೆ ಇತರರು ಶಾರಿಖ್ ಗುರುರು ಪತ್ತೆ ಮಾಡಿದರು.
ಅಲ್ಲದೆ ಶಾರಿಖ್ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಇವನೇ ಶಾರೀಕ್ ಎಂದು ತನಿಖಾಧಿಕಾರಿ ಪರಮೇಶ್ವರ್ ಗೆ ಹೇಳಿಕೆ ನೀಡಿದ್ದಾರೆ.
ಶಾರಿಕ್ ಎಷ್ಟು ವರ್ಷದಿಂದ ಊರಿಗೆ ಬಂದಿಲ್ಲ ಕಡೆಯ ಬಾರಿ ಯಾವಾಗ ನೋಡಿದ್ದು ಎಂಬಿತ್ಯಾದಿ ಮಾಹಿತಿಯನ್ನು ಚಿಕ್ಕಮ್ಮ,ಅಜ್ಜಿ,ಸೋದರಿಯಿಂದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ ಪಡೆಯಲಾಯಿತು.
ಫಾದರ್ ಮುಲ್ಲರ್ ಆಸ್ಪತ್ರೆಗೆ ಕಮಿಷನರ್ ಶಶಿಕುಮಾರ್ ಕೂಡಾ ಆಗಮಿಸಿ ಅಧಿಕಾರಿಗಳಿಂದಾಹಿತಿ ಪಡೆದರು.
ಶಾರೀಕ್ ಜತೆ ಸಂಪರ್ಕದಲ್ಲಿದ್ದ ಮೈಸೂರು, ಶಿವಮೊಗ್ಗ, ಮಂಗಳೂರಿನಲ್ಲಿ ಮೂವರನ್ನು ಬಂಧಿಸಿದ್ದಾರೆ. ಊಟಿಯಲ್ಲಿ ಕೂಡ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶಾರಿಖ್ ಮೂಲತಃ ಶಿವಮೊಗ್ಗದ ತೀರ್ಥಹಳ್ಳಿ ಸಮೀಪದ ಸೊಪ್ಪುಗದ್ದೆಯ ಆಜಾದ್ ನಗರದವನು.
ಇವನ ತಾಯಿ ತೀರಿಕೊಂಡ ಮೇಲೆ ತಂದೆ ಮತ್ತೊಂದು ಮದುವೆಯಾದರು. ನಂತರ ತಂದೆಯೂ ತೀರಿಕೊಂಡರು.
ಚಿಕ್ಕಮ್ಮನ ಮನೆಯಲ್ಲಿದ್ದ ಶಾರೀಖ್, ಉಗ್ರ ಸಂಘಟನೆಯ ಬಗ್ಗೆ, ಧರ್ಮದ ಮತ್ತು ತಲೆಗೇರಿಸಿಕೊಂಡಿದ್ದನು.
ಗೋಡೆ ಮೇಲೆ ಐಸಿಸ್ ಸಂಘಟನೆಯ ಘೋಷ ವಾಕ್ಯಗಳನ್ನು ಬರೆದು ಜೈಲು ಸೇರಿದ್ದ ಈಗ ಒಂದು ಹೆಜ್ಜೆ ಮುಂದೆ ಹೋಗಿ ಬಾಂಬ್ ತಯಾರಿಸಿ ಅದನ್ನು ಸ್ಪೋಟಿಸುವ ಮಟ್ಟಕ್ಕೆ ಹೋಗಿದ್ದ.
ಇನ್ನು ಶಾರೀಖ್ ಗೆ ಸಿಮ್ ನೀಡಿದ್ದ ಹಾಗೂ ಮೊಬೈಲ್ ರಿಪೇರಿ ಟ್ರೈನಿಂಗ್ ಗೆ ಕರೆದುಕೊಂಡು ಹೋಗಿದ್ದ ಮೈಸೂರಿನ ಸೈಯ್ಯದ್ ಅಹಮದ್ ನನ್ನು ಪೋಲಿಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಅಗ್ರಹಾರ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಗೂ ಬಾಂಬ್ ಸ್ಫೋಟಿಸಿದವನಿಗೂ ಸಂಬಂಧ ಏನು ಎಂಬುದರ ತನಿಖೆ ನಡೆಯುತ್ತಿದೆ.
ಶಂಕಿತನ ಜೊತೆ ಸೈಯ್ಯದ್ ಎಲ್ಲೆಲ್ಲಿ ಹೋಗಿದ್ದ ಎಲ್ಲಾ ಸ್ಥಳಗಳ ತಪಾಸಣೆ ಮಾಡುತ್ತಿದ್ದಾರೆ.
ಮೈಸೂರಿನ ಲೋಕನಾಯಕ ನಗರದಲ್ಲಿರುವ ಶಂಕಿತನ ಮನೆಯಲ್ಲಿ ಎನ್ಐಎ ತಂಡ ತಡರಾತ್ರಿ ತನಕ ಪರಿಶೀಲನೆ ನಡೆಸಿತು.

