ಡಿಕೆಶಿಗೆ ಬೊಮ್ಮಾಯಿ ತಿರುಗೇಟು

ಹುಬ್ಬಳ್ಳಿ: ರಾಮನಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ ಅದೇ ರೀತಿ ಹನುಮನಿಗೂ ಬಜರಂಗದಳಕ್ಕೂ ಸಂಬಂಧ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಡಿ.ಕೆ.ಶಿವಕುಮಾರ್ ಗೆ‌ ತಿರುಗೇಟು ನೀಡಿದ್ದಾರೆ.

ಅಂಜನೇಯನಿಗೂ ಭಜರಂಗದಳಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ ಶಿವಕುಮಾರ್ ಗೆ ಬೊಮ್ಮಾಯಿ, ರಾಮನಗೂ ಹನುಮನಿಗೂ ಇರುವ ಸಂಬಂಧವನ್ನು ‌ಹೇಳಿ ತಿರುಗೇಟು ಕೊಟ್ಟಿದ್ದಾರೆ .

ಹನುಮನಿಗೂ ಭಜರಂಗದಳಕ್ಕೂ ಸಂಬಂಧ ಇದೆ. ಇದನ್ನು ಕಾಂಗ್ರೆಸ್ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಕಾರ್ಯಕ್ರಮದ ಆಧಾರದಲ್ಲಿ ಚುನಾವಣೆ ಎದುರಿಸಿ. ಜಾತಿ, ಧರ್ಮ, ಕೋಮು ಭಾವನೆ ಕೆರಳಿಸುವುದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ಎಸ್ ಡಿ ಪಿ ಐ ಮತ್ತು ಪಿಎಫ್ ಐ ಕಪಿಮುಷ್ಠಿಯಲ್ಲಿದೆ ಎಂದು ಇದೇ‌ ವೇಳೆ  ಬೊಮ್ಮಾಯಿ ಟೀಕಿಸಿದರು.