ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಗಳು ಹಬ್ಬಗಳ ಸಮಯದಲ್ಲಿ ಹೆಚ್ಚು ಬೇಡಿಕೆಯ ಟಿಕೇಟ್ ಗಾಗಿ ಪ್ರಯಾಣಿಕರನ್ನು ಶೋಷಿಸುವ ಅನಧಿಕೃತ ವ್ಯಕ್ತಿಗಳ ಸಂಚನ್ನು ಭೇದಿಸುವಲ್ಲಿ ಯಶಸ್ವಿಯಾಗಿವೆ.
ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಅನಧಿಕೃತ ‘ಟೌಟ್’ಗಳನ್ನು ಹತ್ತಿಕ್ಕಲು ಮತ್ತು ಹಬ್ಬದ ಸೀಸನ್ನಲ್ಲಿ ಅಧಿಕೃತ ಪ್ರಯಾಣಿಕರ ಶೋಷಣೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಮೈಸೂರಿನ ಆರ್ಪಿಎಫ್ ವಿಭಾಗೀಯ ಸಂರಕ್ಷಣಾ ಕಮಿಷನರ್ ಜೆ. ಕೆ. ಶರ್ಮಾ ಅವರ ಮಾರ್ಗದರ್ಶನದಲ್ಲಿ ಕ್ರೈಂ ಇನ್ಸ್ಪೆಕ್ಟರ್ ಎಂ. ನಿಷಾದ್, ಸಬ್ ಇನ್ಸ್ಪೆಕ್ಟರ್ ಬಿ. ಚಂದ್ರಶೇಖರ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಮತ್ತು ಈಶ್ವರ್ ರಾವ್ ನೇತೃತ್ವದ ವಿಶೇಷ ತಂಡ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರಿ ದಾಳಿ ನಡೆಸಿತು.
ವಿಶೇಷ ಕಾರ್ಯಾಚರಣೆ ವೇಳೆ ಮೂವರನ್ನು ಬಂಧಿಸಲಾಗಿದೆ.
ಶ್ರೀ ರೇಣುಕಾ ಸೈಬರ್ ಸೆಂಟರ್ನ ಗಣೇಶ್ ರಾಮ್ ನಾಯ್ಕ್( 31), ಶ್ರೀ ಕಮ್ಯುನಿಕೇಷನ್ ಮೊಬೈಲ್ ಸೇಲ್ಸ್ನಿಂದ ರೇವಣ್ಣಪ್ಪ(36) ಮತ್ತು ಆರ್ಯ ಸೈಬರ್ ವಲಯದಿಂದ ಪ್ರಶಾಂತ್ ಹೆಗಡೆ(46) ಬಂಧಿತ ಆರೋಪಿಗಳು
2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್ಗಳು ಮತ್ತು 1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ಗಳು, ಪ್ರಿಂಟರ್ಗಳು ಮತ್ತು ಮೊಬೈಲ್ ಫೋನ್ಗಳಂತಹ ಗ್ಯಾಜೆಟ್ಗಳನ್ನು ಆರ್ಪಿಎಫ್ ವಶಪಡಿಸಿಕೊಂಡಿದೆ.
ಇವುಗಳಿಂದ ಆ ತಂಡಗಳು ಇ-ಟಿಕೆಟ್ಗಳನ್ನು ತೆಗೆದುಕೊಂಡು ದುಬಾರಿ ಬೆಲೆಗೆ ಮಾರಲು ಬಳಸುತ್ತಿದ್ದವು ಎಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ತಿಳಿಸಿದರು.
ಈ ಗ್ಯಾಂಗ್ಗಳು ವಿವಿಧ ಫೋನ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಬಹು ವೈಯಕ್ತಿಕ ಐಡಿಗಳನ್ನು ರಚಿಸುವ ವಿಧಾನವನ್ನು ಬಳಸಿಕೊಂಡಿದ್ದು ಹಬ್ಬಗಳ ಸಮಯದಲ್ಲಿ ವಿಪರೀತ ಬೇಡಿಕೆಯಿದ್ದಾಗ ಅಗತ್ಯವಿರುವ ಪ್ರಯಾಣಿಕರಿಗೆ ಹೆಚ್ಚಿನ ಕಮಿಷನ್ಗಳನ್ನು ವಿಧಿಸಿ ಹೆಚ್ಚಿನ ಬೆಲೆಗೆ ಮಾರಲು ಅನಧಿಕೃತ ಇ-ಟಿಕೆಟ್ಗಳನ್ನು ಉತ್ಪಾದಿಸುತ್ತಿದ್ದವು ಎಂದು ಹೇಳಿದರು.
ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡ ಅನಧಿಕೃತ ‘ಟೌಟ್’ಗಳು ಮತ್ತು ಟ್ರಾವೆಲ್ ಏಜೆಂಟ್ಗಳ ವಿರುದ್ಧ ಆರ್ಪಿಎಫ್ ದಾಳಿಗಳನ್ನು ಮುಂದುವರಿಸುವುದಾಗಿ ತಿಳಿಸಿದರು.
ಟ್ರಾವೆಲ್ ಏಜೆಂಟ್ಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವಂತೆ ಮತ್ತು ಅವರ ದುರಾಸೆಗೆ ಬಲಿಯಾಗದಂತೆ ಅವರು ಪ್ರಯಾಣಿಕರಲ್ಲಿ ಮನವಿ ಮಾಡಿದರು.
ದಾಳಿ ವೇಳೆ ಆರ್ಪಿಎಫ್ ತಂಡದಲ್ಲಿ ಹೆಡ್ ಕಾನ್ಸ್ಟೆಬಲ್ ಡಿ ಚೇತನ್, ಕಾನ್ಸ್ಟೆಬಲ್ ಎ. ಪ್ರವೀಣ್, ಕಾನ್ಸ್ಟೆಬಲ್ ಇಳಂಗೋವನ್, ಮಹಿಳಾ ಕಾನ್ಸ್ಟೇಬಲ್ ಶ್ರೀಲಕ್ಷ್ಮಿ ಪಿ. ಸೋಮನ್ ಮತ್ತು ಮಹಿಳಾ ಕಾನ್ಸ್ಟೇಬಲ್ ಎಂ.ಎಸ್. ತನುಜಾ ಭಾಗವಹಿಸಿದ್ದರು.

