ನವದೆಹಲಿ: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಹೀನ ಕೃತ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಗಿದ್ದು,ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ರೇಂಜರ್ನನ್ನ ರಾಜಾಸ್ಥಾನದ ಗಡಿ ಭದ್ರತಾ ಪಡೆ ಬಂಧಿಸಿದೆ.
ಏಪ್ರಿಲ್ ನಲ್ಲಿ ಗೊತ್ತಿಲ್ಲದೆ ಗಡಿ ಪ್ರವೇಶಿಸಿದ್ದ ಭಾರತೀಯ ರೇಂಜರ್ನನ್ನು ಬಂಧಿಸಿದ 15 ದಿನಗಳ ಬಳಿಕ ಈ ಪಾಕ್ ರೇಂಜರ್ನನ್ನ ಬಂಧಿಸಲಾಗಿದೆ.
ಗಡಿ ಸಮೀಪದ ಪ್ರದೇಶಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾಗ ಬಹಾವಲ್ಪುರ್ ವಲಯದಿಂದ ಬಿಎಸ್ಎಫ್ ಪಡೆ ಪಾಕಿಸ್ತಾನಿ ರೇಂಜರ್ನನ್ನ ಬಂಧಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಏಪ್ರಿಲ್ 23 ರಂದು ಪಂಜಾಬ್ನ ಈ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ರೇಂಜರ್ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕ್ ಸೈನಿಕರು ಬಂಧಿಸಿದ್ದರು.
ಭಾರತ ಮಾತುಕತ ನಡೆಸಿದ್ದರೂ ರೇಂಜರ್ನನ್ನ ಪಾಕ್ ಭಾರತಕ್ಕೆ ಹಸ್ತಾಂತರಿಸಿಲ್ಲ.