ಮೈಸೂರು: ಭಾರತ-ಪಾಕಿಸ್ತಾನಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಭಗವದ್ಗೀತಾ ಪಾರಾಯಣ ಮಾಡಿ ನಮ್ಮ ಸೈನಿಕರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ನಿನ್ನೆ ಮತ್ತು ಇಂದು ಇಂಟರ್ನ್ಯಾಷನಲ್ ಗೀತಾ ಫೌಂಡೇಶನ್ ವತಿಯಿಂದ ಭಗವದ್ಗೀತೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀಗಳು ಪದಕ ಮತ್ತು ಪ್ರಮಾಣ ಪತ್ರ ವಿತರಿಸುವ ಮೊದಲು ಗೀತಾ ಪಾರಾಯಣ ಮಾಡಿದರು.
ಈ ಸಂದರ್ಭದಲ್ಲಿ ನಮ್ಮ ಇಡೀ ದೇಶದ ಜನರನ್ನು ಕಾಪಾಡುತ್ತಿರುವ ಮತ್ತು ತ್ಯಾಗ ಮಾಡುತ್ತಿರುವ ಸೈನಿಕರಿಗೆ ಒಳಿತು ಮಾಡುವಂತೆ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸಿದ್ದಾರೆ.
ಹಾಗೂ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಅಪಮೃತ್ಯು ಹೊಂದಿದ ಪ್ರವಾಸಿಗರಿಗೆ ಸದ್ಗತಿ ಸಿಗಲಿ ಎಂದು ಶ್ರೀ ಕೃಷ್ಣ ನಲ್ಲಿ ಪ್ರಾರ್ಥಿಸಿ ಅರ್ಪಣೆ ಮಾಡಿದ್ದಾರೆ.
ನಂತರ ಭಗವದ್ಗೀತೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಇಂಟರ್ನ್ಯಾಷನಲ್ ಗೀತಾ ಫೌಂಡೇಶನ್ ಅವರು ದತ್ತ ಪೀಠದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಈ ಪರೀಕ್ಷೆಯಲ್ಲಿ ದೊಡ್ಡವರು, ಚಿಕ್ಕ ಮಕ್ಕಳು ಪರೀಕ್ಷೆ ಬರೆದಿರುವುದು ತುಂಬಾ ಒಳ್ಳೆಯ ವಿಷಯ ಎಂದು ಹೇಳಿದರು.
ಸುಮಾರು 5000 ಮಂದಿ ಕಂಠಪಾಠ ಮಾಡಿದ್ದಾರೆಂದು ಹೇಳಿದ್ದು ಕೇಳಿ ನನಗೆ ಸಂತೋಷವಾಯಿತು. ಇದರಲ್ಲಿ ಅತ್ಯಂತ ಕಿರಿಯ ಮಕ್ಕಳು ಭಾಗವಹಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪ್ರಮಾಣ ಪತ್ರ ಮತ್ತು ಪದಕ ಪಡೆಯುತ್ತಿರುವುದು ಒಳ್ಳೆಯದು ಎಂದು ಆಶೀರ್ವದಿಸಿದರು.
ಭಗವದ್ಗೀತೆ ಪರೀಕ್ಷೆಯಲ್ಲಿ ಆರು ವರ್ಷದ ಪೂರ್ವಾಂಚ್ ದತ್ತ ಮತ್ತು ಸಿಸ್ಲ ಶ್ರೀಹಿತ ಅವರು ಅತ್ಯಂತ ಕಿರಿಯ ವಹಿಸಿನಲ್ಲಿ ಪ್ರಮಾಣ ಪತ್ರ ಮತ್ತು ಪದಕ ಪಡೆದಿರುವುದು ವಿಶೇಷ.
ಅದೇ ರೀತಿ ಅತ್ಯಂತ ಹಿರಿಯರಾದ 79 ವರ್ಷ ವಯಸ್ಸಿನ ಬ್ರಮರಾಂಭ ಸೆವಿ ಮತ್ತು ಸುಜಾತ ಅವರು ಕೂಡ ಭಗವದ್ಗೀತೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಪದಕ ಮತ್ತು ಪ್ರಮಾಣಪತ್ರ ಪಡೆದುಕೊಂಡರು.