(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ರಸ್ತೆ ನಿಯಮ ಉಲ್ಲಂಘನೆ ಮಾಡಿದರೂ ಯಾರೂ ಪೊಲಿಸರಿಗೆ ಹೆದರೋಲ್ಲ,ನಿಯಮ ಉಲ್ಲಂಘನೆ ಇಲ್ಲಿ ಸರ್ವೆ ಸಾಮಾನ್ಯ ಇದಕ್ಕೆ ಪೊಲೀಸರು ಹೊರತಲ್ಲ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೊಕಿನ ಪಟ್ಟಣದಲ್ಲಿ ರಸ್ತೆ ನಿಯಮ ಉಲ್ಲಂಘನೆ ಸಾಮಾನ್ಯ,ಆದರಲ್ಲೂ ಪೊಲೀಸರೇ ನಿಯಮ ಉಲ್ಲಂಘನೆ ಮಾಡುವುದು ಸಾಮಾನ್ಯ ಆಗಿಬಿಟ್ಟಿದೆ.
ಚಾಮರಾಜನಗರ ಪಟ್ಟಣದಲ್ಲಾದರೆ ಸಂಚಾರಿ ಠಾಣೆ ಇದೆ ದಂಡ ಹಾಕ್ತಾರೆ…ಆದರೆ ಗುಂಡ್ಲುಪೇಟೆಯಲ್ಲಿ ಸಂಚಾರಿ ಠಾಣೆ ಇಲ್ಲ ದಂಡ ಹಾಕೋಕೆ ಸಿಬ್ಬಂದಿಗಳು ಇರ್ತಾರಾ ಅನ್ನೋದು ಮತ್ತೊಂದು ವಾದ.
ಚಾಮರಾಜನಗರ ಜಿಲ್ಲಾ ಪೊಲೀಸರ ಪೈಕಿ ಚಾಮರಾಜನಗರ ಪಟ್ಟಣದಳೊಗೆ ವಾಹನ ಸವಾರರು ,ಪಿಲಿಯನ್ ರೈಡರ್(ಹಿಂಬದಿ ಸವಾರ) ಶಿರಸ್ತ್ರಾಣ ಧರಿಸೋದು ಬಿಟ್ರೆ, ಇನ್ನ ಹನೂರು ರಾಮಾಪುರದಂತ ಕಾಡಂಚಿನ ಠಾಣೆ ಸಿಬ್ಬಂದಿಗಳು ಹಾಕೋದನ್ನ ನೋಡಿದರೆ ಅವರನ್ನ ಶ್ಲಾಘಸಿಬೇಕಾದ್ದೆ.
ಆದರೆ ಸಮೀಪದ ತಾಲ್ಲೋಕಿನಲ್ಲಿ ಬಹುಪಾಲು ಆರಕ್ಷಕರು ನಿಯಮ ಉಲ್ಲಂಘನೆ ಮಾಡೊದು ಸಾಮಾನ್ಯ…ಆದರೆ ಇಲ್ಲಿ ಹಿಂಬದಿ ಸವಾರರಿರಲಿ ಮುಂಬದಿ ಸವಾರರೆ ಶಿರಸ್ತ್ರಾಣ ಧರಿಸದೆ ಇರೋದು ವಿಪರ್ಯಾಸ.
ಚಾಮರಾಜನಗರ ಪೊಲೀಸ್ ಅದೀಕ್ಷಕರು ಹಲವರಿಗೆ ವರ್ಗಾವಣೆ, ದಂಡ ವಿದಿಸಿ ಎಚ್ಚರಿಸಿದರೂ ಯಾವ ಪೊಲೀಸರಿಗೂ ಭಯ ಇಲ್ಲವಾಗಿದೆ.