ಗಾಯಗೊಂಡ ವ್ಯಕ್ತಿ ರಸ್ತೆಯಲ್ಲಿ ನರಳಾಡುತ್ತಿದ್ದರೂ ನೆರವಿಗೆ ಬಾರದ ಸಚಿವ

ಮಂಡ್ಯ: ಅಪಘಾತದಲ್ಲಿ ಸಿಲುಕಿ ವ್ಯಕ್ತಿ ರಸ್ತೆಯಲ್ಲಿ ನರಳಾಡುತ್ತಿದ್ದರೆ ನೆರವಿಗೆ ಬಾರದೆ ಅಸಹಾಯಕನಾಗಿ ನೋಡುತ್ತಾ ನಿಂತ ಸಚಿವ ಚೆಲುವರಾಯಸ್ವಾಮಿ ನಡೆ ಚರ್ಚೆಗೆ ಗ್ರಾಸ ಒದಗಿಸಿದೆ.

ಚಲುವರಾಯಸ್ವಾಮಿ ಹಾಗೇ‌ ಸುಮ್ಮನೆ ನೋಡುತ್ತಾ ನಿಂತ ದೃಶ್ಯಗಳನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.

ಮೈಸೂರು ಬೆಂಗಳೂರು ಹೆದ್ದಾರಿ ಶ್ರೀರಂಗಪಟ್ಟಣ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸಿಲುಕಿದ ವ್ಯಕ್ತಿ ನರಳಾಡುತ್ತಿದ್ದರು.ಅದೇ ವೇಳೆ ಆ ದಾರಿಯಲ್ಲಿ ಬಂದ ಸಚಿವರು ನೆರವಿಗೆ ಧಾವಿಸದೆ ನೋಡುತ್ತಾ ನಿಂತರು.

ರಸ್ತೆ ಬದಿ ವ್ಯಕ್ತಿ ನರಳಾಡುತ್ತಿದ್ದರೂ ಕಾರಿನ ಬಳಿಯೇ ನಿಂತು ವೀಕ್ಷಿಸುತ್ತಿದ್ದರು.
ಕನಿಷ್ಟ ಗಾಯಾಳುವಿನ ಸ್ಥಿತಿಯನ್ನೂ ಗಮನಿಸಿಲ್ಲ.

ಈ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಜೀವನ್ಮರಣದ ನಡುವೆ ನರಳಾಡುತ್ತಿದ್ದರು.
ಸಚಿವರ ಸರ್ಕಾರಿ ಕಾರು, ಅಂಗರಕ್ಷಕರ ವಾಹನ ಇದ್ದರೂ ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸುವ ಚಿಂತೆ ಮಾಡಲಿಲ್ಲ,
ಸ್ಥಳಕ್ಕೆ ಪೊಲೀಸರನ್ನ ಕರೆಸಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದರು.

ಈ ದೃಶ್ಯಗಳನ್ನ ಸ್ವತಃ ತಮ್ಮ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿಕೊಂಡ ಸಚಿವರ ವರ್ತನೆಯನ್ನ ಸಾರ್ವಜನಿಕರು ಟೀಕಿಸಿದ್ದಾರೆ,ಜತೆಗೆ ಆಕ್ರೋಶವೂ ವ್ಯಕ್ತವಾಗಿದೆ.