ಮೈಸೂರು: ಕಾರಿನಲ್ಲಿ ಇಟ್ಟಿದ್ದ ಪ್ರೆಸ್ ರಿಪೋರ್ಟರ್ ಒಬ್ಬರ ರಿವಾಲ್ವರ್ ಕಾಣೆಯಾಗಿದ್ದು, ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಶಾಲನಗರ ಮಂಗಲಾ ಗ್ರಾಮದ ಕಾಫಿ ಎಸ್ಟೇಟ್ ಮಾಲೀಕರೂ ಹಾಗೂ ಪ್ರೆಸ್ ರಿಪೋರ್ಟರ್ ಆಗಿರುವ ತಿಮ್ಮಯ್ಯ (52) ಅವರ ರಿವಾಲ್ವರ್ ಕಳ್ಳತನವಾಗಿದೆ.
ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿ ಇಡಲಾಗಿದ್ದ 22 ಬೋರ್ ರಿವಾಲ್ವರ್ ಹಾಗೂ ಲೋಡ್ ಮಾಡಲಾಗಿದ್ದ 8 ಜೀವಂತ ಗುಂಡುಗಳು ನಾಪತ್ತೆಯಾಗಿದೆ.
ಕಾರನ್ನ ರಿಪೇರಿಗೆ ಬಿಟ್ಟಿದ್ದ ವೇಳೆ ಕಳ್ಳತನವಾಗಿದೆ ಎಂದು ತಿಮ್ಮಯ್ಯ ಅವರು ದೂರು ನೀಡಿದ್ದಾರೆ.
ತಮ್ಮ ಆತ್ಮರಕ್ಷಣೆಗಾಗಿ ತಿಮ್ಮಯ್ಯ ಅವರು, 2016 ರಲ್ಲಿ 22 ಬೋರ್ ರಿವಾಲ್ವರ್ ಖರೀದಿಸಿ 100 ಲೈವ್ ಬುಲೆಟ್ ಗಳನ್ನೂ ಸಹ ಕೊಂಡಿದ್ದರು.
ತಿಮ್ಮಯ್ಯ ತಮ್ಮ ಫೋರ್ಡ್ ಕಾರನ್ನ ರಿಪೇರಿ ಮಾಡಿಸುವ ಸಲುವಾಗಿ ಮೈಸೂರಿಗೆ ಬಂದಿ ದ್ದಾರೆ.ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಿವಾಲ್ವರ್ ಹಾಗೂ 8 ಜೀವಂತ ಗುಂಡುಗಳನ್ನ ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿಟ್ಟಿದ್ದಾರೆ.
ಟಿಪ್ಪು ಸರ್ಕಲ್ ಬಳಿ ಇರುವ ಗ್ಯಾರೇಜ್ ನಲ್ಲಿ ಕಾರನ್ನ ಬಿಡುವ ಸಮಯದಲ್ಲಿ ರಿವಾಲ್ವರ್ ತೆಗೆದುಕೊಂಡಿಲ್ಲ ಹಾಗೆಯೇ ಬಂದಿದ್ದಾರೆ, ರಿಪೇರಿಯಾದ ಕಾರನ್ನ ಹಿಂಪಡೆದು ತಾವು ತಂಗಿದ್ದ ಲಾಡ್ಜ್ ಗೆ ತಲುಪಿದಾಗ ರಿವಾಲ್ವರ್ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಗ್ಯಾರೇಜ್ ಮಾಲೀಕನನ್ನ ಕೇಳಿದಾಗ ಗೊತ್ತಿಲ್ಲವೆಂದು ತಿಳಿಸಿದ್ದಾನೆ,ಹಾಗಾಗಿ ತಿಮ್ಮಯ್ಯ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿ ರಿವಾಲ್ವರ್ ಪತ್ತೆ ಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.

