ಮೈಸೂರು: ಶ್ರೀನರಸಿಂಹ ಜಯಂತಿಯ ಅಂಗವಾಗಿ ಮಂಗಳವಾರ ವಿಪ್ರ ಸಹಾಯವಾಣಿಯ ವತಿಯಿಂದ ನಗರದ ವಿದ್ಯಾರಣ್ಯಪುರಂನಲ್ಲಿರುವ ಅವನಿ ಶಂಕರ ಮಠದಲ್ಲಿ ಅರ್ಚಕರಿಗೆ, ಅಡುಗೆ ಕೆಲಸಗಾರರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ರವರು 50 ಮಂದಿ ಆರ್ಥಿಕವಾಗಿ ಹಿಂದುಳಿದ ಪುರೋಹಿತರಿಗೆ, ಅಡುಗೆ ಕೆಲಸಗಾರರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದರು,
ನಂತರ ಶೆಲ್ವಪಿಳೈ ಅಯ್ಯಂಗಾರ್ ರವರು ಮಾತನಾಡಿ, ಭಾರತದಲ್ಲಿ ರಾಮಾಯಣ, ಮಹಾಭಾರತ ಪ್ರಾರಂಭದಿಂದಲೂ ರಾಜರ ಆಳ್ವಿಕೆ ಬ್ರಿಟೀμï ಆಳ್ವಿಕೆ ಇಂದಿನ ಪ್ರಜಾಪ್ರಭುತ್ವದವರೆಗೂ ಬ್ರಾಹ್ಮಣ ಅರ್ಚಕ ಪುರೋಹಿತರ ಉಲ್ಲೇಖ ಅಸ್ಥಿತ್ವವಿದೆ. ಲೋಕಾ ಸಮಸ್ತಾ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಪುರೋಹಿತ ವರ್ಗಕ್ಕೆ ಸರ್ಕಾರ ಅಗತ್ಯಕರವಾಗಿ ಸಹಾಯ ಮಾಡುವಲ್ಲಿ ಮುಂದಾಗಬೇಕಿದೆ ಎಂದು ಹೇಳಿದರು.
ಮುಜರಾಯಿ ಇಲಾಖೆ ದೇವಸ್ಥಾನದ ವ್ಯಾಪ್ತಿಯಲ್ಲಿ ಒಳಪಡುವ ಅರ್ಚಕರಿಗೆ ತಸ್ಥಿಕ್ ಮತ್ತು ದಿನಸಿ ಅದು 3 ತಿಂಗಳಿಗೆ 1500ರೂಗಳಂತೆ ಆಹಾರ ಕಿಟ್ ನೀಡುತ್ತಿದ್ದು, ಆದರೆ ಖಾಸಗಿ ದೇವಸ್ಥಾನ ಮತ್ತು ಅರಳಿಕಟ್ಟೆ ಗುಡಿಗೋಪುರಗಳಲ್ಲಿ ಪೂಜಾಕೈಂಕರ್ಯದಲ್ಲಿ ತೊಡಗಿರುವ ಅರ್ಚಕರು ಮತ್ತು ಶ್ರಾದ್ಧಕಾರ್ಯ ಮಾಡಿಸುವ ಸಣ್ಣಪುಟ್ಟ ಪುರೋಹಿತ ವರ್ಗಕ್ಕೂ ಆರ್ಥಕ ನೆರವು ನೀಡುವತ್ತ ಮುಜರಾಯಿ ಇಲಾಖೆ ಇನ್ನು ಮುಂದಾದರು ಯೋಜನೆ ರೂಪಿಸಬೇಕಾಗಿದೆ, ಅಡುಗೆ ಕೆಲಸಗಾರರು ಅಸಂಘಟಿತ ವಲಯದ ಅಡಿಯಲ್ಲಿ ಬರುವದರಿಂದ ಕಳೆದ 1 ವರುಷಗಳಿಂದ ಯಾವುದೇ ಕಾರ್ಯಕ್ರಮಗಳಿಲ್ಲ ಅಡುಗೆ ಕೆಲಸಗಾರರ ಕುಟುಂಬ ವರ್ಗದ ಹಿತದೃಷ್ಟಿಯಿಂದ ಕಾರ್ಮಿಕ ಇಲಾಖೆ ನೆರವು ನೀಡುವಲ್ಲಿ ಮುಂದಾಗಲಿ ಎಂದು ಅವರು ಹೇಳಿದರು
ಮುಖಂಡರಾದ ಎಸ್.ಟಿ. ಶ್ರೀಧರ್, ಗಾಯತ್ರಿ, ಸುಮಾ, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್,
ವಿಪ್ರ ಸಹಾಯವಾಣಿಯ ಸಂಚಾಲಕ ವಿಕ್ರಂ ಅಯ್ಯಂಗಾರ್, ಯುವ ಮುಖಂಡ ಅಜಯ್ ಶಾಸ್ತ್ರಿ, ಚಕ್ರಪಾಣಿ, ಲತಾ ಬಾಲಕೃಷ್ಣ, ಭೂಮಿಕಾ, ಮುಳ್ಳೂರು ಸುರೇಶ್, ಗೋಪಿನಾಥ್, ಚಿದಂಬರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

