ಬೆಂಗಳೂರು: ರಾಜ್ಯದ ನಿವೃತ್ತ ಡಿಜಿಪಿ- ಐಜಿ ಓಂ ಪ್ರಕಾಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಓಂ ಪ್ರಕಾಶ್ ಅವರನ್ನು ಅವರ ಪತ್ನಿಯೇ ಕೊಲೆ ಮಾಡಿದ್ದಾರೆ.ಅದೂ ಚಾಕುವಿನಿಂದ
ಕೊಲೆ ಮಾಡಲಾಗಿದೆ.
10 ದಿನಗಳ ಹಿಂದೆ ಪಲ್ಲಿವಿ ಮತ್ತು ಓಂ ಪ್ರಕಾಶ ನಡುವೆ ಜಗಳವಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹತ್ಯೆಯಾಗಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ
ವಾರದ ಹಿಂದೆ ಐಪಿಎಸ್ ಅಧಿಕಾರಿಗೆ ಪಲ್ಲವಿ ಅವರು ಮೆಸೇಜ್ ಮಾಡಿ,ನನಗೆ ಮತ್ತು ಮಗಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದಾರೆ ಎಂದು ಪತಿ ವಿರುದ್ಧ ದೂರಿದ್ದರು.
ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಓಂ ಪ್ರಕಾಶ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕೆಂದು ಆಕೆ ಮನವಿ ಮಾಡಿಕೊಂಡಿದ್ದರು
ಪತಿ ಗನ್ ಹಿಡಿದುಕೊಂಡು ಮನೆಯಲ್ಲಾ ಓಡಾಡುತ್ತಾರೆ. ಯಾವ ಕ್ಷಣದಲ್ಲಿ ಬೇಕಾದ್ರು ನಮ್ಮನ್ನು ಸಾಯಿಸಬಹುದು.ಆದ್ದರಿಂದ ಸುಮೋಟೊ ದಾಖಲಿಸಿ ಎಂದು ಪಲ್ಲವಿ ಅವರು ಮನವಿ ಮಾಡಿದ್ದರು
ಓಂ ಪ್ರಕಾಶ್ ಅವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮನೆಗೆ ಧಾವಿಸಿ ಪರಿಶೀಲಿಸಿ, ಪತ್ನಿ ಪಲ್ಲವಿ ಅವರನ್ನು ವಶಕ್ಕೆ ಪಡೆದಿದ್ದಾರೆ.

