ಮೈಸೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾದ ಘಟನೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಕಾಕರವಾಡಿಯಲ್ಲಿ ನಡೆದಿದ್ದು,ಪತ್ನಿಯ ಕುತಂತ್ರದಿಂದ ಪತಿ ಮಹಮದ್ ಷಫಿ ಬಲಿಯಾಗಿದ್ದಾರೆ.
ಪತ್ನಿ ಶಬ್ರೀನ್ ತಾಜ್ ಹಾಗೂ ಪ್ರಿಯಕರ
ಅನ್ವರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮದ್ ಷಫಿ ಹಾಗೂ ಶಬ್ರೀನ್ ತಾಜ್ 16 ವರ್ಷಗಳ ಹಿಂದೆ ಮದುವೆ ಅಗಿದ್ದರು.ದಂಪತಿಗೆ 12 ವರ್ಷದ ಮಗಳಿದ್ದಾಳೆ.
ರೇಡಿಯೇಟರ್ ಕೆಲಸ ಮಾಡುತ್ತಿದ್ದ ಮಹಮದ್ ಷಫಿ ಹಾಗೂ ಪತ್ನಿ ನಡುವೆ ಐದಾರು ವರ್ಷಗಳಿಂದ ಅನ್ಯೋನ್ಯತೆ ಇರಲಿಲ್ಲ.
ಗಾರ್ಮೆಂಟ್ಸ್ ನಲ್ಲಿ ಶಬ್ರೀನ್ ತಾಜ್ ಕೆಲಸ ಮಾಡುತ್ತಿದ್ದಳು.ಪ್ರತಿದಿನ ಆಟೋದಲ್ಲಿ ಅನ್ವರ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕರೆದೊಯ್ಯುತ್ತಿದ್ದ.ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರಿಗಿದೆ.
ಈ ವಿಚಾರ ತಿಳಿದು ಪತಿ ಹಲಾಟೆ ಮಾಡಿದ್ದಾರೆ.ಹಿರಿಯರು ಇಬ್ಬರ ನಡುವೆ ಸಂಧಾನ ನಡೆಸಿದ್ದಾರೆ.ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂದು ನಿರ್ಧರಿಸಿದ ಶಬ್ರೀನ್ ತಾಜ್ ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ್ದಾಳೆ.
ಈ ವಿಚಾರವನ್ನು ಪ್ರಿಯಕರನಿಗೂ ತಿಳಿಸಿ ಶಬ್ರೀನ್ ತನ್ನ ತಾಯಿ ಮನೆಗೆ ತೆರಳಿದ್ದಾಳೆ.ಈ ವೇಳೆ ಪತಿ ಮಹಮದ್ ಷಫಿ ಮನೆಗೆ ಬಂದು ಮಲಗಿದ್ದ.
ಈ ವಿಚಾರವನ್ನ ಪ್ರಿಯಕರನಿಗೆ ತಿಳಿಸಿದ್ದಾರೆ. ಆಟೋವನ್ನ ದೂರದಲ್ಲಿ ನಿಲ್ಲಿಸಿ ಮನೆಗೆ ಪ್ರವೇಶಿಸಿದ ಪಾಪಿ ಅನ್ವರ್ ಮಲಗಿದ್ದ ಷಫಿಯ ಕುತ್ತಿಗೆಯನ್ನ ಮೊಬೈಲ್ ಚಾರ್ಜರ್ ನಿಂದ ಬಿಗಿದು ಕೊಂದು ಏನೂ ತಿಳಿಯದಂತೆ ಹೊರಬಂದಿದ್ದಾನೆ.
ಅದೇ ರಾತ್ರಿ ಮಹಮದ್ ಷಫಿ ಮನೆಯವರಿಗೆ ಫೋನ್ ಮಾಡಿ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.
ಮನೆಗೆ ಬಂದ ಷಫಿ ಕಡೆಯವರು ಇವರ ಮಾತನ್ನ ನಂಬಿದ್ದಾರೆ.ಮೃತದೇಹಕ್ಕೆ ಸಂಪ್ರದಾಯವಾಗಿ ಸ್ನಾನ ಮಾಡಿಸುವ ವೇಳೆ ಕುತ್ತಿಗೆಯಲ್ಲಿ ಗಾಯದ ಗೆರೆ ಕಾಣಿಸಿದ್ದು ತಕ್ಷಣ ಕೆ.ಆರ್.ಠಾಣೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ಮೃತದೇಹ ಪರಿಶೀಲಿಸಿದ ಪೊಲೀಸರಿಗೆ ಕೊಲೆಯಾಗಿರುವುದು ಗೊತ್ತಾಗಿದೆ.ಕೂಡಲೇ ನಡೆದ ಸಂಪೂರ್ಣ ಮಾಹಿತಿ ಕಲೆಹಾಕಿದಾಗ ಪತ್ನಿಯೇ ಸ್ಕೆಚ್ ಹಾಕಿ ಮಹಮದ್ ಷಫಿಯನ್ನ ಪ್ರಿಯಕರನ ಮೂಲಕ ಕೊಂದ ರಹಸ್ಯ ಬಯಲಾಗಿದೆ.ಇದೀಗ ಪಾಪಿಗಳಿಬ್ಬರೂ ಕಂಬಿ ಎಣಿಸುತ್ತಿದ್ದಾರೆ.