ಮೈಸೂರು: ಕಡಿಮೆ ಖರ್ಚಿನಲ್ಲಿ ಉತ್ತರಪ್ರದೇಶ ಹಾಗೂ ದೆಹಲಿ ಪ್ರವಾಸ ಮಾಡಿಸುವುದಾಗಿ ನಂಬಿಸಿ ಮೈಸೂರಿನ ಇಬ್ಬರು ಮಹಿಳೆಯರಿಗೆ 18.50 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಈ ಸಂಭಂಧ ಇಬ್ಬರು ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿದ್ದಾರ್ಥನಗರದ ಸುವರ್ಣ ಎಂಬುವರು 5.96 ಲಕ್ಷ ಹಾಗೂ ಗಾಯಿತ್ರಿಪುರಂ ನ ಪಂಕಜ ಎಂಬುವರು 12.61 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಆನ್ ಲೈನ್ ನಲ್ಲಿ ಕಡಿಮೆ ಖರ್ಚಿನಲ್ಲಿ ದೆಹಲಿ ಹಾಗೂ ಉತ್ತರಪ್ರದೇಶ ಪ್ರವಾಸ ಮಾಡಿಸುವುದಾಗಿ ಜಾಹಿರಾತು ಪ್ರಕಟವಾಗಿದೆ.
ಅದನ್ನು ನಂಬಿ ಮೊಬೈಲ್ ನಂಬರ್ ಗೆ ಸಂಪರ್ಕಿಸಿದಾಗ ಕೆಲವು ಪ್ಯಾಕೇಜ್ ಗಳ ಮಾಹಿತಿ ನೀಡಿ ವಿವಿದ ಹಂತಗಳಲ್ಲಿ ಹಣ ಹಾಕಿಸಿಕೊಂಡಿದ್ದಾರೆ.
ತಿಂಗಳುಗಳು ಕಳೆದರೂ ಪ್ರವಾಸಕ್ಕೆ ಕರೆದೊಯ್ಯುವ ಸೂಚನೆ ಬರಲೇ ಇಲ್ಲ.
ಜಾಹಿರಾತಿನಲ್ಲಿದ್ದ ನಂಬರ್ ಗೆ ಕರೆ ಮಾಡಿದರೆ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ.ತಾವು ಮೋಸ ಹೋಗಿರುವುದು ಗೊತ್ತಾಗಿ ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.