ಮೈಸೂರು: ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಇಲ್ಲ ಅಂದ್ರು ಆಕಾಶ ಕಳಚಿ ಬೀಳಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ
ಅವರಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಗೃಹಲಕ್ಷ್ಮೀ ಹಣ ಕೊಡಲಿಲ್ಲ ಅಂದ್ರೆ ಆಕಾಶ ಕಳಚಿ ಬೀಳಲ್ಲ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಿ ಟಿ ರವಿ ಈ ರೀತಿ ಡೈಲಾಗ್ ಹೊಡೆದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2 ವರ್ಷಕ್ಕೇನೆ ರಾಜ್ಯ ಸರ್ಕಾರದ ಗ್ಯಾರಂಟಿ ಸಾಕಾಯ್ತ ಎಂದು ಪ್ರಶ್ನಿಸಿದರಲ್ಲದೆ ಎಲ್ಲರೂ ಸ್ವಲ್ಪ ದಿನ ಕಾಯಿರಿ, ಏನೆಲ್ಲಾ ಆಗುತ್ತೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಸಚಿವ ಜಮೀರ್ ಅಹಮ್ಮದ್ ಇಲಾಖೆಯಲ್ಲಿ ಗೋಲ್ಮಾಲ್ ನಡೆಯುತ್ತಿರುವ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ತನಿಖೆ ನಡೆಯಬೇಕು. ಹಗರಣಗಳನ್ನು ನಮಗೆ ಸಿಗುವ ಅವಾರ್ಡ್ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಹಗರಣಗಳೇ ಅವಾರ್ಡ್ ಅಂದುಕೊಂಡು ಹಗರಣಗಳ ಸರಮಾಲೆ ನಡೆಯುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಇದೆಲ್ಲ ಕಾಂಗ್ರೆಸ್ಗೆ ಸಿಕ್ಕ ಪ್ರಶಸ್ತಿನಾ ಎಂದು ಕಾರವಾಗಿ ಪ್ರಶ್ನಿಸಿದರು.