ಮೈಸೂರು: ಗಾನ ಕೋಗಿಲೆ, ಪ್ರಖ್ಯಾತ ಗಾಯಕಿ ಎಸ್ ಜಾನಕಿ ಅವರ ನಿಧನಕ್ಕೆ ಮೈಸೂರು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತೀವ್ರ ದುಃಖ ವ್ಯಕ್ತಪಡಿಸಿ,ಸಂತಾಪ ಸೂಚಿಸಿದ್ದಾರೆ.
ನಮ್ಮ ಆಶ್ರಮಕ್ಕೆ ಬಹಳ ಸಾರಿ ಜನಕಮ್ಮ ಬಂದಿದ್ದಾರೆ ಕೊನೆಯ ದಿನಗಳಲ್ಲೂ ಕೂಡ ದರ್ಶನ ಮಾಡಿ ಹೋಗಿದ್ದಾರೆ ಒಂದು ವೇಳೆ ನಾವು ಆಶ್ರಮದಲ್ಲಿ ಇಲ್ಲದಿದ್ದರೂ ದೇವರ ದರ್ಶನ ಮಾಡಿ ಹೋಗುತ್ತಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.
ಎಸ್ ಜಾನಕಿ ಅವರು ಸಾವಿರಾರು ಹಾಡುಗಳನ್ನು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ ಅವರು ಕೋಗಿಲೆಯೇ ಸರಿ.ಸ್ವಾಮೀಜಿಯವರ ಕುರಿತು ಕೂಡಾ ಹಾಡಿದ್ದಾರೆ.ಬಹಳ ಪಾಪ್ಯುಲರ್ ಆಗಿವೆ ಎಂದು ಬಣ್ಣಿಸಿದರು.
ನಾವು ನಮ್ಮ ನಾಡಿನ ಕೋಗಿಲೆಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಶ್ರೀ ಗಣಪತಿ ಸ್ವಾಮೀಜಿ ಬಹಳ ವಿಷಾದಿಸಿದರು.
ಜಾನಕಮ್ಮ ಅವರ ಮನಸ್ಸಿಗೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗದವರಿಗೆ ಅಭಿಮಾನಿಗಳಿಗೆ, ಸಂಬಂಧಿಕರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸ್ವಾಮೀಜಿ ಪ್ರಾರ್ಥಿಸಿದರು.

