ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಕಾರ್ಮಿಕರು ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ತೆರೆಯಲಾಗಿದೆ -ಹೇಮಂತ್ ಕುಮಾರ್ ಗೌಡ

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿ ಜೀವಧಾರ ಪದವೀಧರ ಘಟಕ ಸಹಾಯವಾಣಿ ತೆರೆದಿದ್ದು, ಸೇವಾಸಿಂಧೂ ಪೆÇೀರ್ಟಲ್ ಆನ್ಲೈನ್ ನೊಂದಣಿ ಪ್ರಕ್ರಿಯೆಯನ್ನ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.
ನಗರದ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಸೋಮವಾರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡರವರು 50 ಕಲಾವಿದರಿಗೆ ಸ್ವೀಕೃತಿ ಪತ್ರವನ್ನ ವಿತರಿಸಿ, ನಂತರ ಅವರು ಮಾತನಾಡಿದರು.
ರಾಜ್ಯ ಸರ್ಕಾರದಿಂದ ಕೋವಿಡ್ ಸಂಕಷ್ಟ ಆರ್ಥಿಕ ಪರಿಹಾರ ನಿಧಿ ನೀಡಲಾಗುತ್ತಿದ್ದು ಕಲಾವಿದರು ಸೇರಿದಂತೆ ಕುಂಬಾರರು, ಅಗಸರು, ಕ್ಷೌರಿಕರು, ದರ್ಜಿಗಳು, ಮೆಕ್ಯಾನಿಕ್, ಹಮಾಲರು, ಅಲೆಮಾರಿಗಳು, ಭಟ್ಟಿ ಕಾರ್ಮಿಕರು ಅಕ್ಕಸಾಲಿಗರು, ಕಮ್ಮಾರರು, ಆಟೋ ಚಾಲಕರು ಗೃಹ ಕಾರ್ಮಿಕರ ವರೆಗೂ ಅಸಂಘಟಿತ ವಲಯದ ಅಡಿಯಲ್ಲಿ ಶ್ರಮಿಸುವ ವರ್ಗಕ್ಕೆ ಕರ್ನಾಟಕ ಸರ್ಕಾರ 2000ರೂಗಳ ಆರ್ಥಿಕ ಸಂಕಷ್ಟ ಪರಿಹಾರ ನಿಧಿ ನೀಡಲಾಗುವುದು ಎಂದರು.
ಸೂಕ್ತ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವೃತ್ತಿ ದೃಢೀಕರಣಪತ್ರ ಮತ್ತು ಭಾವಚಿತ್ರವನ್ನ ತಂದು ನಾಗರೀಕರು ಇದರ ಸವಲತ್ತನ್ನು ಪಡೆಯಬಹುದಾಗಿದೆ ಎಂದವರು ತಿಳಿಸಿದರು.
ನಂತರ ಕಲಾವಿದರಾದ ಮೈಕ್ ಚಂದ್ರು ಮಾತನಾಡಿ, 35ವರ್ಷ ಮೇಲ್ಪಟ ಕಲಾವಿದರಿಗೆ ಸರ್ಕಾರ ಸಹಾಯಧನ ನೀಡಲು ವಯೋಮಿತಿ ವಿಧಿಸಿದ್ದು ಲಾಕ್ ಡೌನ್ ನಿಂದ ಪ್ರದರ್ಶನವಿಲ್ಲದ ಕಾರಣ ಯುವಕಲಾವಿದರು ತೊಂದರೆಯಲ್ಲಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಗಮನಹರಿಸಿ ನೆರವು ನೀಡಲಿ ಎಂದರು.
ನಂತರ ಬಿಜೆಪಿ ವಕ್ತಾರ ಎಂ.ವಿ ಮೋಹನ್ ರವರು ಮಾತನಾಡಿ ಜೀವ ಮೊದಲ ನಂತರ ಜೀವನ ಹಾಗಾಗಿ ನಾವೆಲ್ಲರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಸಲಿಸಬೇಕು 20 ಜನಕ್ಕೂ ಅಧಿಕ ಮಂದಿ ಸೇರಲು ಅವಕಾಶವಿಲ್ಲದ ಕಾರಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸಂಘ ಸಂಸ್ಥೆಗಳು ಸಾಮಾಜಿಕ ಜಾಲತಾಣ ಮಾಧ್ಯಮ ಬಳಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಮುಂದಾಗಬೇಕು ಇದರಿಂದ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬಹುದು ಎಂದರು.
ಕರ್ನಾಟಕದಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆಂದು ರಾಜ್ಯ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ತಲಾ 3000ರೂಗಳನ್ನು ಬಿಡುಗಡೆ ಮಾಡಿದ್ದು ಜೀವಧಾರ ಪದವೀಧರ ಘಟಕದ ವತಿಯಿಂದ ಅರ್ಹ 50 ಕಲಾವಿದರಿಗೆ ಅದರ ಸವಲತ್ತು ತಲುಪಿಸಲು ಸೇವಾಸಿಂಧು ಮೂಲಕ ಆನಲೈನ್ ಪ್ರಕ್ರಿಯೆ ಸಹಾಯ ವ್ಯವಸ್ಥೆ ಮಾಡಿಕೊಡಲಾಯಿತು.