ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿ, 28 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಇದರೊಂದಿಗೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
4 ಉಪ ಕಾರ್ಯದರ್ಶಿಗಳಿಗೆ ಸ್ಥಳ ನಿಯೋಜಿಸಿ ಆದೇಶ ನೀಡಿದ್ದು 3 ಕೆಎಎಸ್ ಅಧಿಕಾರಿಗಳನ್ನ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಉಪ ಕಾರ್ಯದರ್ಶಿಗಳಿಬ್ಬರ ಸೇವೆ ಹಿಂಪಡೆದು ಡಿಪಿಎಆರ್ಗೆ ವರದಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ.
ಅನಿಲ್ ಕುಮಾರ್-ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಬೆಂಗಳೂರು, ಕಪಿಲ್ ಮೋಹನ್-ಎಸಿಎಸ್, ಆಹಾರ ಇಲಾಖೆ, ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ, ಸೆಲ್ವ ಕುಮಾರ್-ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ, ನವೀನ್ ರಾಜ್ ಸಿಂಗ್-ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ, ಜೆ.ರವಿಶಂಕರ್-ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು,ಡಾ.ರಂದೀಪ್-ಆಯುಕ್ತರು, ಆರೋಗ್ಯ ಇಲಾಖೆ,ಕೆ.ಬಿ.ತ್ರಿಲೋಕ ಚಂದ್ರ-ವಿಶೇಷ ಆಯುಕ್ತರು, ಬಿಬಿಎಂಪಿ,ಕೆ.ಪಿ.ಮೋಹನ್ ರಾಜ್-ಎಂಡಿ, ಕೆಎಸ್ಐಐಡಿಸಿ, .ಬಿ.ಬಿ.ಕಾವೇರಿ-ಎಂಡಿ, ಕೆಎಸ್ಎಂಸಿಎಲ್, ಟಿ.ಹೆಚ್.ಎಂ.ಕುಮಾರ್-ಆಯುಕ್ತರು, ಜವಳಿ ಇಲಾಖೆ,ಪ್ರಿಯಾಂಕಾ ಮೇರಿ ಫ್ರಾನ್ಸಿಸ್-ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನಗವಲ್ಲಿ-ನಿರ್ದೇಶಕರು ಸಮಗ್ರ ಮಕ್ಕಳ ರಕ್ಷಣೆ ಯೋಜನೆ, ಬಿ.ರಾಮ್ ಪ್ರಸಾತ್-ನಿರ್ದೇಶಕರು, ಗಣಿ ಇಲಾಖೆ, ವೆಂಕಟೇಶ್ ಕುಮಾರ್-ಕಾರ್ಯದರ್ಶಿ, ಕೆಕೆಆರ್ ಡಿಬಿ, ಚಾರುಲತಾ ಸೋಮಲ್-ಜಿಲ್ಲಾಧಿಕಾರಿ, ರಾಯಚೂರು, ಶಿಲ್ಪಾನಾಗ್-ಆಯುಕ್ತರು, ಪಂಚಾಯತ್ ರಾಜ್ ಇಲಾಖೆ,ಲಕ್ಷ್ಮೀ ಪ್ರಿಯಾ-ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಿ.ಹೆಚ್.ನಾರಾಯಣ ರಾವ್-ಸಿಇಒ, ವಿಜಯನಗರ ಜಿ.ಪಂ, ಉಕೇಶ್ ಕುಮಾರ್, ಕೋಲಾರ ಜಿ.ಪಂ ಸಿಇಒ,ಬಿ.ಸಿ.ಸತೀಶ್-ಕೊಡಗು ಜಿಲ್ಲಾಧಿಕಾರಿ, ಹೆಚ್.ಎನ್.ಗೋಪಾಲ ಕೃಷ್ಣ-ಎಂಡಿ, ಕೆಪಿಎಲ್ಸಿಎಲ್, ಶಿವಾನಂದ-ಆಹಾರ ನಿಗಮದ ಎಂಡಿ. ಎಂ.ಎಸ್.ಅರ್ಚನಾ-ನಿರ್ದೇಶಕರು.

