ಪಟ್ಟಕ್ಕೇರಿದ ಕಾಂಗ್ರೆಸ್ : ಮಕಾಡೆ ಮಲಗಿದ ಬಿಜೆಪಿ

ಬೆಂಗಳೂರು: ದೇಶ,ವಿದೇಶಗಳಲ್ಲಿ‌‌‌ ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕಅಧಿಸಭಾ ಚುನಾವಣೆಯ ಮತ ಎಣಿಕೆ‌ ಕಾರ್ಯ‌ ಪೂರ್ಣಗೊಂಡಿದ್ದು ಕಾಂಗ್ರೆಸ್ ಪಕ್ಷ ಭಾರೀ ಜಯಸಾಧಿಸುವ‌ ಮೂಲಕ ಅಧಿಕಾರದ‌‌ ಗದ್ದುಗೆ ಹಿಡಿಯುವುದು ಪಕ್ಕಾ‌ ಆಗಿದೆ.

ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಪ್ರಾರಂಭವಾದಗಿನಿಂದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾದುಕೊಂಡು ಬಂದಿದ್ದರು.

ಕೆಲವೆಡೆ ಮಾತ್ರ ಹಾವು ಏಣಿ ಆಟ ನಡೆದಿತ್ತು ಕಡೆಗೆ 136‌ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ

ಸಾದಿಸಿದೆ

ಭಾರತೀಯ ಜನತಾ ಪಕ್ಷದ ಘಟಾನುಘಟಿ ನಾಯಕರು ಈ ಬಾರಿ ಸೋಲನ್ನು ಅನುಭಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್, ಜಿ ಪರಮೇಶ್ವರ್,ರಾಮಲಿಂಗ ರೆಡ್ಡಿ, ಪ್ರಿಯಾಂಕ್ ಖರ್ಗೆ, ಎಂ. ಕೃಷ್ಣಪ್ಪ,ಕೆ.ಜೆ.ಜಾರ್ಜ್ ಹಾಗೂ ಚುನಾವಣೆ ಸಂದರ್ಭದಲ್ಲಿ ದಿಢೀರ್ ನಿಧನರಾದ ಧ್ರುವನಾರಾಯಣ್ ಅವರ ಪುತ್ರ

ದರ್ಶನ್,ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ಗೆ ಬಂದಿದ್ದ ಲಕ್ಷ್ಮಣ ಸವದಿ‌ ಸೇರಿದಂತೆ 136 ಮಂದಿ ಗೆಲುವು ಸಾದಿಸಿದ್ದಾರೆ.

ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ,ಪ್ರತಿಷ್ಟಿತ ಕಣವಾಗಿದ್ದ ಹಾಸನದಲ್ಲಿ‌ ಸ್ವರೂಪ್  ಸೇರಿದಂತೆ 19 ಮಂದಿ‌ ಜಯ ಸಾಧಿಸಿದ್ದಾರೆ.

ಜೆಡಿಎಸ್ ನಲ್ಲಿ‌ ನಿಖಿಲ್‌ ಕುಮಾರಸ್ವಾಮಿ,ಸಾ.ರಾ ಮಹೇಶ್‌ ಮತ್ತಿತರ ಘಟಾನುಘಟಿಗಳು ಸೋಲನುಭವಿಸಿದ್ದಾರೆ.

ಈ ಬಾರಿ ನಾವೇ ಸಂಪೂರ್ಣ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂದು ಬೀಗಿದ್ದ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಆರಗ ಜ್ಞಾನೇಂದ್ರ, ಬಿ. ವೈ ವಿಜಯೇಂದ್ರ ಸೇರಿದಂತೆ ಕೇವಲ‌ 65 ಮಂದಿ ಗೆಲುವು‌ ಸಾದಿಸಿದ್ದಾರೆ.

ಇದೆ ಮೊದಲ ಬಾರಿಗೆ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸಡ್ಡು ಹೊಡೆದು ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದ್ದಾರೆ.

ರಾಜ್ಯದಲ್ಲಿ ಪಕ್ಷಗಳ ಬಲಾಬಲ ಹೀಗಿದೆ-:

ಕಾಂಗ್ರೆಸ್- 136

ಬಿಜೆಪಿ-65

ಜೆಡಿಎಸ್-19

ಇತರರು-2

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ -1

ಸರ್ವೋದಯ ಕರ್ನಾಟಕ ಪಕ್ಷ-1

ಕರ್ನಾಟಕ ವಿಧಾನಸಭೆಯಲ್ಲಿ 224 ಕ್ಷೇತ್ರಗಳಿದ್ದು 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವರು ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ.

ಅದರಂತೆ 136 ಕ್ಷೇತ್ರಗಳಲ್ಲಿ ಗೆಲುವು ಸಾದಿಸಿರುವ ಕಾಂಗ್ರೆಸ್ ಪಕ್ಷ  ಸರ್ಕಾರ ರಚಿಸುವುದು ಖಚಿತವಾಗಿದೆ.