ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ: ಪ್ರತಾಪ್ ಸಿಂಹ

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಶಿವನ ದರ್ಶನ ಮಾಡಿದರು.

ಪ್ರತಾಪ್ ಸಿಂಹ ಅವರು ಅಶೋಕ ರಸ್ತೆಯಲ್ಲಿರುವ ಶ್ರೀ ಕನಿಕಾ ಪರಮೇಶ್ವರಿ ದೇವಸ್ಥಾನ, ಹಳೆ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಶ್ರೀ ಅಮೃತೇಶ್ವರ ದೇವಸ್ಥಾನ ಹಾಗೂ ಮೇಟಗಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.

ಈ‌ ವೇಳೆ ಮಾತನಾಡಿದ ಅವರು ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ
ಎಂದು ಹೇಳಿದರು.

ಧಾರ್ಮಿಕ ನಂಬಿಕೆಯಲ್ಲಿ ಬದುಕಿನ ಶ್ರೇಷ್ಠತೆ‌ ಅಡಗಿದೆ ಎಂದು ಹೇಳಿದ ಅವರು, ಪ್ರತಿ ಜೀವಿಯಲ್ಲಿಯೂ
ದೇವರಿದ್ದಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಎಸ್ ಕೆ ದಿನೇಶ್, ರಾ ಪರಮೇಶ್ ಗೌಡ, ಸಂದೇಶ್, ಸತೀಶ್, ಬ್ರಹ್ಮಚಾರ್, ವಿ ಎಸ್ ಕಿರಣ್, ರಾಮು, ಅರುಣ್, ವಿನೋದ್ ಅರಸ್, ಪ್ರಮೋದ್ ಗೌಡ, ಮಲ್ಲಿಕ್, ಕಾಂತ , ದೇವರಾಜ್, ಸಂಜೀವಿನಿ ಕುಮಾರ್, ದಿವಾಕರ್, ಟೆನ್ನಿಸ್ ಗೋಪಿ, ರವಿಕುಮಾರ್, ಚಿಕ್ಕ ರಾಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.