ವಿವಿದ ಕಳ್ಳತನ ಪ್ರಕರಣಗಳಲ್ಲಿ ನಾಲ್ವರನ್ನ ಜೈಲಿಗಟ್ಟಿದ ಸೆನ್ ಠಾಣೆ ಪೊಲೀಸರು

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪಟ್ಟಣದಲ್ಲಿ ನಡೆದಿದ್ದ ಕಳ್ಳತನಗಳ ಪೈಕಿ ಇತ್ತೀಚೆಗೆ ನಡೆದ ಮೂರು ಕಳ್ಳತನಗಳನ್ನ ಚಾಮರಾಜನಗರ ಸೆನ್ ಠಾಣಾ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಜನವರಿ ೭ ರಂದು ಪಟ್ಟಣ ಠಾಣಾ ವ್ಯಾಪ್ತಿಯ ನಿವಾಸಿ ರೇಣುಕಾ ಎಂಬುವವರು ಸಿದ್ಧಾರ್ಥನಗರದ ತಮ್ಮ ವಾಸದ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದರು.

ವಾಪಸು ಬಂದಾಗ ತಮ್ಮ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳು, ಬೆಳ್ಳಿ ಪದಾರ್ಥಗಳು ಮತ್ತು ನಗದು ಹಣವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಈ ಬಗ್ಗೆ ಚಾಮರಾಜನಗರ ಪಟ್ಟಣ ಪೊಲೀಸ್ ಉಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಎಸ್ಪಿ ಬಿಟಿ ಕವಿತಾರವರು ಸಿದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರಾದ, ಡಾ. ಬಿ.ಟಿ ಕವಿತರವರ ನಿರ್ದೇಶನ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಲಕ್ಷ್ಮಯ್ಯ ಅವರ ಸಾರಥ್ಯದಲ್ಲಿ ಚಾಮರಾಜನಗರ ಸಿ.ಇ.ಎನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಾಗರ್ ಎಸ್.ಎಲ್ ಅವರ ನೇತೃತ್ವದಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮಂಜುನಾಥ್. ಆರ್ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಈ ಪ್ರಕರಣ ಭೇದಿಸುವಲ್ಲಿ ಸಫಲರಾಗಿ ಆರೋಪಿಗಳನ್ನು ಬಂದಿಸಿದ್ದಾರೆ‌.

ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದ ದೇವರಾಜು, ನಗರ ಹೌಸಿಂಗ್ ಬೋರ್ಡ್ ದೀಪುನಾಯಕ್, ಜಾಲಹಳ್ಳಿಹುಂಡಿಯ ಅರ್ಜುನ್, ರಾಮುಸಮುದ್ರದ ಅವಿನಾಶ್, ಎಂಬವರನ್ನು ಬಂಧಿಸಲಾಗಿದೆ.

ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಿಂದ ಮೊ ಸಂ 07/2025 ರ ಜೊತೆಗೆ ಚಾ.ನಗರ ಪಟ್ಟಣ ಠಾಣೆ ಮೊ ಸಂ 63/2025 ಮತ್ತು 70/2025 ಮತ್ತೆರಡು ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ.

ಮೇಲ್ಕಂಡ ಪ್ರಕರಣಗಳಲ್ಲಿ ಒಟ್ಟು 418 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳು, 8.5 ಕೆ.ಜಿ ತೂಕದ ಬೆಳ್ಳಿ ಪದಾರ್ಥಗಳು, 2 ಲಕ್ಷ ಬೆಲೆಬಾಳುವ ಕ್ಯಾಮಾರ ಮತ್ತು ಕ್ಯಾಮಾರ ಲೆನ್ಸ್ ಇವುಗಳ ಮೌಲ್ಯ ಸುಮಾರು 42,25,000 ರೂ ಎಂದು ಅಂದಾಜು ಮಾಡಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಟಾರ್ ಬೈಕ್‌ ನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ

ಈ ಪ್ರಕರಣಗಳ ಆರೋಪಿಗಳ ಹಾಗೂ ಮಾಲಿನ ಪತ್ತೆ ಕಾರ್ಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಗರ್ ,. ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಮಂಜುನಾಥ,ಮೋಹನ್ ಕುಮಾರ್, ಮಹೇಶ್, ಮಹದೇವ, ಮಂಜುನಾಥ, ಮೋಹನ , ನಿಂಗರಾಜು ಹಾಗೂ ತಾಂತ್ರಿಕ ವಿಭಾಗದ ವೆಂಕಟೇಶ್, ಎಎಸ್‌ಐ, ಶಂಕರ್ ರಾಜು,, ತನಿಖಾ ಸಹಾಯಕರಾದ ಮಹೇಶ್ , ಶ್ರೀನಿವಾಸಮೂರ್ತಿ, ಗಿರೀಶ , ಚಾಲಕರಾದ ಮಲ್ಲೇಶ್ ಕುಮಾರ್ ಅವರು ಭಾಗವಹಿಸಿದ್ದು, ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ , ಪೊಲೀಸ್ ಉಪಾಧೀಕ್ಷಕರಾದ ಲಕ್ಷ್ಮಯ್ಯ ಅವರು ಉಪಸ್ಥಿತರಿದ್ದರು.