ಚಾಮರಾಜನಗರ: ಪಟ್ಟಣ ಪೊಲೀಸ್ ಠಾಣೆ ಸಮೀಪವೇ ಪತಿ ಪತ್ನಿಯನ್ನು ಬರ್ಬರ ಹತ್ಯೆ ಮಾಡಿದ್ದು ಕೊಲೆಗಡುಕರಿಗೆ ಪೊಲೀಸರ ಬಯವೇ ಇಲ್ಲವೇನೊ ಅನಿಸುತ್ತಿದೆ.
ಹೆಂಡತಿಯನ್ನ ಮಚ್ಚಿನಿಂದ ಪತಿ ಕೊಚ್ಚಿ ಕೊಲೆ ಮಾಡಿದ್ದಾನೆ.
ವಿದ್ಯಾ(28)ಕೊಲೆಯಾದ ಮಹಿಳೆ.
ಚಾಮರಾಜನಗರದ ಸೋಮವಾರಪೇಟೆ ಯ ಗಿರೀಶ್ ಎಂಬಾತ ಪತ್ನಿಯನ್ನು ಕೊಂದ ಆರೋಪಿ.
ಕೌಟುಂಬಿಕ ಕಲಹ ಹಿನ್ನೆಲೆ ಪತಿ ಪತ್ನಿ ನಡುವೆ ಜಗಳವಾಗಿ ಅದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಇಂದು ಮದ್ಯಾಹ್ನ ವಿದ್ಯಾ ನಡೆದುಕೊಂಡು ಬರುತ್ತಿದ್ದಾಗ ಪತಿ ಮಚ್ಚಿನಿಂದ ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವಿದ್ಯಾ ಸಾವನ್ನಪ್ಪಿದ್ದು, ಗಿರೀಶ್ ಪರಾರಿಯಾಗಿದ್ದಾನೆ. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.