ಮೈಸೂರು: ಐಪಿಎಲ್ ಮ್ಯಾಚ್ ಗಳನ್ನು ಬ್ಯಾನ್ ಮಾಡಿ ಎಂದು ಒತ್ತಾಯಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳವರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ
ವಾಟಾಳ್,ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ ಅಮಾಯಕರ ಬಲಿಗೆ ಕಾರಣರು ಯಾರು,ಇದರ ಹೊಣೆ ಯಾರು ಹೊರಬೇಕು ಎಂದು ಪ್ರಶ್ನಿಸಿದರು.
ವಿಜಯೋತ್ಸವ ಸಮಾರಂಭ ಆಯೋಜಿಸಿದ್ದು ಯಾರು,ಗುಪ್ತಚರ ಇಲಾಖೆ ವಿಫಲವೆ,ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರು ಇರಲಿ ಅಂತವರ ವಿರುದ್ಧ ಕ್ರಮ ಅಸಗಲೇಬೇಕು ಎಂದು ವಾಟಾಳ್ ಆಗ್ರಹಿಸಿದರು.
ಜೊತೆಗೆ ಕಾಲ್ತುಳಿತಕ್ಕೆ ಬಲಿಯಾದ 11ಮಂದಿ ಅಮಾಯಕರಿಗೆ ತಲಾ 5 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಪಾರ್ಥಸಾರಥಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಶಂಕರ್, ಗೋಲ್ಡ್ ಸುರೇಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ನೇಹಾ, ಮಧುವನ ಚಂದ್ರು, ಬಸವರಾಜು, ಪ್ರದೀಪ್ ಹನುಮಂತಯ್ಯ, ಪ್ರಭಾಕರ್, ದರ್ಶನ್ ಗೌಡ, ರವಿ ನಾಯಕ್, ಶಿವರಾಂ, ರಘು, ಆನಂದ್, ರಾಮಕೃಷ್ಣೇಗೌಡ, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.