ಗಣಪತಿ ಸಚ್ಚಿದಾನಂದ ಆಶ್ರಮ ಸಹಯೋಗದಲ್ಲಿ ನಿರಾಶ್ರಿತರಿಗೆ ಆಹಾರ ಪೂರೈಕೆ

ಮೈಸೂರು: ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮ ಸಹಯೋಗದೊಂದಿಗೆ ಮಹಾರಾಣಿ ಕಾಲೇಜು ಹಳೇ ವಿದ್ಯಾರ್ಥಿನಿಯರ ರಕ್ತಸಂಬಂಧಿ ಬಳಗ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣ, ಕೃಷ್ಣರಾಜ ಚೆಲುವಾಂಬ ಆಸ್ಪತ್ರೆಯ ಬಳಿ ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬದವರಿಗೆ ಮತ್ತು ನಿರಾಶ್ರಿತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಆಹಾರ ಪೆÇಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್ ಅನ್ನು ಸೋಮವಾರ ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಜೀವಧಾರ ಪದವಿಧರರ ಸಮಿತಿಯ ಕಾರ್ಯದರ್ಶಿ ಆರ್. ವರಲಕ್ಷ್ಮಿ ಮಾತನಾಡಿ ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ನಿಂದಾಗಿ ದಿನಗೂಲಿ ನೌಕರರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ನೆರವಾಗಲೆಂದು ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಪ್ರತಿನಿತ್ಯ ಸಾವಿರಾರು ಮಂದಿಗೆ ವಿವಿದೆಡೆ ಆಹಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಾನವೀಯತೆಯ ಸಂಧರ್ಭದಲ್ಲಿ ಪುಣ್ಯದ ಕೆಲಸ ಇದರಲ್ಲಿ ನಮ್ಮ ಮಹಾರಾಣಿ ಕಾಲೇಜಿನ ಹಳೇ ವಿದ್ಯಾರ್ಥಿನಿಯರ ರಕ್ತಸಂಬಂಧಿ ಬಳಗ ಭಾಗವಹಿಸಿದೆ ಎಂದರು.
ಕೊವಿಡ್ 3ನೇ ಅಲೆ ಸಣ್ಣಪುಟ್ಟ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ತಜ್ಞರ ವೈದ್ಯರ ನಿರ್ದೇಶನವಿದ್ದು ನಮ್ಮ ಮನೆಯಲ್ಲಿರುವ ಹಾಗೂ ಸುತ್ತಮುತ್ತಲಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕು ಹಾಗೂ ಜಿಲ್ಲಾಡಳಿತ ನಗರಪಾಲಿಕೆ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮ ವಹಿಸಿ ಮಕ್ಕಳ ತಜ್ಞರ ಸಮಿತಿ, ಮಕ್ಕಳ ಅಸ್ಪತ್ರೆಯ ಬಗ್ಗೆ ಗಮನ ವಹಿಸಬೇಕಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ವಿನಯ್ ಬಾಬು, ಬಿಜೆಪಿ ಮುಖಂಡರಾದ ಜಯಶಂಕರ್, ಸಚ್ಚಿನ್, ಯುವ ಮುಖಂಡ ಅಜಯ್ ಶಾಸ್ತ್ರಿ, ರಕ್ತಸಂಬಂಧಿ ಬಳಗದ ಅಧ್ಯಕ್ಷೆಯಾದ ಶೀಲಾ, ಸರಸ್ವತಿ, ಸೌಮ್ಯ, ಸಿಂಧೂ, ಪಲ್ಲವಿ, ರಶ್ಮಿ, ಮುಖಂಡರಾದ ರವಿ, ದೇವರಾಜು, ನಾಗೇಂದ್ರ, ಮಹಲಿಂಗು, ಸುಮನ್, ಮಧುರ, ನಂದಿನಿ ಹಾಗೂ ಇನ್ನಿತರರು ಭಾಗವವಹಿಸಿದ್ದರು.